ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ನಾವೆಲ್ಲರೂ ಆಟಗಾರರು

Last Updated 11 ಮೇ 2020, 19:45 IST
ಅಕ್ಷರ ಗಾತ್ರ

ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಕೋವಿಡ್-19 ವಿರುದ್ಧದ ಹೋರಾಟವನ್ನು ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಜಯಕ್ಕಾಗಿ ನಡೆಯುವ ತುರುಸಿನ ಹಣಾಹಣಿಗೆ ಹೋಲಿಸಿದ್ದಾರೆ (ಪ್ರ.ವಾ., ಮೇ 10).

ಹೌದು, ಭಾರತವೆಂಬ ಕ್ರೀಡಾಂಗಣದಲ್ಲಿ ದೇಶವಾಸಿಗಳೆಲ್ಲರೂ ಆಟಗಾರರೇ! ಇಲ್ಲಿ ಬಹುತೇಕರು ಕ್ರಿಕೆಟ್ ಅನ್ನು ಜೀವನದ ಅವಿಭಾಜ್ಯ ಕ್ರೀಡೆಯೆಂದು ಸ್ವಾಗತಿಸುತ್ತಾರೆ. ಅದರಂತೆ ಕೊರೊನಾ ವಿರುದ್ಧವೂ ಸೆಣಸಿ ಗೆಲ್ಲಲಿ, ಪ್ರತೀ ಪ್ರಜೆಯೂ ಜಾಗರೂಕತೆಯಿಂದ ನಿಯಮ ಪಾಲಿಸಲಿ. ಜಯದ ಶ್ರೇಯ ಸಕಲರಿಗೂ ಸಂಪನ್ನವಾಗಲಿ. ಎಲ್ಲ ಪ್ರಜೆಗಳೂ ಪಂದ್ಯ ಪುರುಷೋತ್ತಮರಾಗಲಿ.

ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT