ಅರ್ಹ ಬಡವರಿಗಲ್ಲದೆ ಅನರ್ಹರಿಗೆ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ (ಪ್ರ.ವಾ., ಮೇ 14) ಎಂಬುದನ್ನು ತಿಳಿದು ಸಂತೋಷವಾಯಿತು.ಆದರೆಇದುಕೇವಲ ಪತ್ರಿಕಾ ಹೇಳಿಕೆಯಾಗದೆ ನಿಜಕ್ಕೂಕಾರ್ಯರೂಪಕ್ಕೆ ಬರಬೇಕಾಗಿದೆ. ಹಾಗೆಮಾಡದಿದ್ದಲ್ಲಿಸರ್ಕಾರದಒಂದು ಒಳ್ಳೆಯ ಯೋಜನೆಯು ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ಹಿಂಬಾಲಕರ ಪಾಲಾಗುವ ಸಾಧ್ಯತೆ ಇರುತ್ತದೆ. ಮನೆಯನ್ನು ಹಂಚುವಾಗಅಗತ್ಯ ದಾಖಲೆಗಳನ್ನು ಪರಿಶೀಲಿಸುವುದರ ಜೊತೆಗೆ ಸರ್ಕಾರಿಅಧಿಕಾರಿಗಳು ಆಗಾಗ್ಗೆ ಅಂತಹಮನೆಗಳಿಗೆ ಕನಿಷ್ಠ ನಾಲ್ಕೈದು ಬಾರಿಯಾದರೂ ಭೇಟಿ ಕೊಟ್ಟು, ಫಲಾನುಭವಿಗಳೇ ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವುದುಒಳ್ಳೆಯದು.ಇಲ್ಲದಿದ್ದರೆಸರ್ಕಾರ ಕೇವಲದಾಖಲೆಗಳನ್ನು ಪರಿಶೀಲಿಸಿ ‘ಚಾಪೆಕೆಳಗೆನುಸುಳಿದರೆ’, ಅವ್ಯವಹಾರಮಾಡುವವರು ‘ರಂಗೋಲಿಕೆಳಗೆ ನುಸುಳುವ’ ಚಾಣಾಕ್ಷ ನಡೆ ಹೊಂದಿರುತ್ತಾರೆ ಎಂಬುದನ್ನು ಮರೆಯಬಾರದು.