ಮುಗಿದುಹೋದ ಗಡಿ ತಂಟೆಯನ್ನು ಮಹಾರಾಷ್ಟ್ರವು ಮತ್ತೆ ಕೆದಕುವ ಮೂಲಕ ವೃಥಾ ಗೊಂದಲ ಸೃಷ್ಟಿಸುತ್ತಿ ರುವುದು ಇದೇ ಮೊದಲಲ್ಲ. ಮಹಾರಾಷ್ಟ್ರ ಗಡಿ ತಂಟೆಯನ್ನು ಎತ್ತಿದಾಗಲೆಲ್ಲ ಕನಾಟಕವು ಕೊಡುವ ಉತ್ತರ: ‘ನಾವು ಒಂದು ಚೂರು ನೆಲವನ್ನೂ ಬಿಟ್ಟುಕೊಡುವುದಿಲ್ಲ’. ಇದನ್ನು ಮಹಾರಾಷ್ಟ್ರವು ನಮ್ಮ ಅಸಹಾಯಕತೆ ಎಂದು ಭಾವಿಸಿದೆ. ಮಹಾರಾಷ್ಟ್ರದಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿರಿರುವ ಸೊಲ್ಲಾಪುರ, ಅಕ್ಕಲಕೋಟೆ, ಕೊಲ್ಹಾಪುರ, ಕರವೀರಪುರ ಮತ್ತು ಜತ್ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕೆಂಬ ಬೇಡಿಕೆಯನ್ನು ದೃಢವಾಗಿ ಮಹಾರಾಷ್ಟ್ರದ ಮುಂದಿಡುವ ದಿಟ್ಟ ಕಾರ್ಯವನ್ನು ಈವರೆಗೂ ನಮ್ಮ ಮುಖ್ಯಮಂತ್ರಿಗಳು ಮಾಡದಿರುವುದು ಅವರ ಪುಂಡಾಟಕ್ಕೆ ಸಹಕಾರಿಯಾಗಿದೆ.