ಶುಕ್ರವಾರ, ಮಾರ್ಚ್ 31, 2023
33 °C

ವಾಚಕರ ವಾಣಿ| ರಾಜಕಾರಣಿಗಳಿಗೆ ಬೇಕು ಶುದ್ಧೀಕರಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರದ ಕೂಪವಾದ ವಿಧಾನಸೌಧವನ್ನು ಗಂಜಲದಿಂದ ಶುದ್ಧೀಕರಣ ಮಾಡುವುದಾಗಿ ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಸಚಿವ ಡಾ. ಅಶ್ವತ್ಥನಾರಾಯಣ, ‘ಭ್ರಷ್ಟಾಚಾರದ ಸಾಕಾರರೂಪವಾಗಿರುವ ಅವರೇ ಪ್ರತಿದಿನ ಗಂಗಾಜಲ, ಗೋಮೂತ್ರ ಬಳಸಿ ಸ್ನಾನ ಮಾಡಿ ಶುದ್ಧಿಯಾಗಲಿ’ ಎಂದಿದ್ದಾರೆ  (ಪ್ರ.ವಾ., ಜ. 26). ಇವರಿಬ್ಬರ ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಗಮನಿಸಿದರೆ, ಭ್ರಷ್ಟಾಚಾರದ ಕೂಪವೆನಿಸಿರುವ ವಿಧಾನಸೌಧಕ್ಕೂ ಅದರಲ್ಲಿ ರಾರಾಜಿಸುವ ರಾಜಕಾರಣಿಗಳಿಗೂ ಗೋಮೂತ್ರ ಸ್ನಾನದ ಅಗತ್ಯ ಇದ್ದಂತೆ ಕಾಣುತ್ತದೆ. ಆದ್ದರಿಂದ, ಕರ್ನಾಟಕದ ನಾಲ್ಕೂ ದಿಕ್ಕುಗಳಿಂದ ವಿಧಾನಸೌಧದ ಒಳಕ್ಕೆ ಗೋವುಗಳನ್ನು ತುಂಬಿಸಿ, ಭ್ರಷ್ಟಾಚಾರದ ಆಗರವಾಗಿರುವ ಸೌಧವನ್ನೂ ಜೊತೆಗೆ ರಾಜಕಾರಣಿಗಳನ್ನೂ ಗಂಜಲದಿಂದ ಶುದ್ಧೀಕರಣ ಮಾಡುವ ಕೆಲಸವನ್ನು ಮತದಾರರು ಮಾಡುವಂತಾಗಲಿ.

 - ತಾ.ಸಿ.ತಿಮ್ಮಯ್ಯ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು