ಬಿಡುಗಡೆಯಾದ ಹತ್ತು ದಿನಗಳೊಳಗೇ ‘ಟಿಪ್ಪು ನಿಜಕನಸುಗಳು’ ಕೃತಿಗೆ ತಡೆಯಾಜ್ಞೆ ಎದುರಾಗಿದೆ. ನಾಟಕವು ಪೊಲೀಸ್ ಬಂದೋಬಸ್ತ್ ನಡುವೆ ಪ್ರದರ್ಶಿಸಲ್ಪಟ್ಟಿದೆ. ಒಂದು ಮುಖ್ಯ ಪ್ರಶ್ನೆಯೆಂದರೆ- ವೈಯಕ್ತಿಕ ಅಜೆಂಡಾಗೆ ಸಂಸ್ಥೆಗಳನ್ನು ಬಳಸಿರುವುದು ಸರಿಯೇ? ಕನಸು ಎಂಬುದರಲ್ಲಿ ಹೇಗೆ ಕಲ್ಪನೆ ಇರುತ್ತದೋ ಹಾಗೆಯೇ ಪುಸ್ತಕದಲ್ಲಿ ಕಾಲ್ಪನಿಕ ಸತ್ಯ ಅಭಿಪ್ರಾಯಸಹಿತ ಇರಬಹುದು. ಒಬ್ಬ ರಾಜನಾಗಿ ಟಿಪ್ಪುವಿನ ಬಗೆಗೆ ವಿವಿಧ ಚಿತ್ರಣಗಳಿವೆ. ತಮಿಳುನಾಡು, ಕೇರಳದಲ್ಲಿ ನಕಾರಾತ್ಮಕ ದಾಖಲೆಗಳಿವೆ. ಇಲ್ಲಿ ‘ಮೈಸೂರಿನ ಹುಲಿ’, ಶೃಂಗೇರಿ- ನಂಜನಗೂಡು ಕತೆಗಳಿವೆ. ತೋಟಗಾರಿಕೆ, ರೇಷ್ಮೆ ಉದ್ಯಮಗಳ ಸಂಬಂಧದಲ್ಲೂ ಆತನ ಹೆಸರನ್ನು ಉಲ್ಲೇಖಿಸಲಾಗುತ್ತದೆ. ಒಟ್ಟಾರೆ ಬ್ರಿಟಿಷರಿಗೆ ಫೈಟ್ ಕೊಟ್ಟವರಲ್ಲಿ ಒಬ್ಬ ಎಂಬುದನ್ನು ಯಾರೂ ನಿರಾಕರಿಸಲಾರರು.