ನಮ್ಮ ಚಿಂತನೆಗಳು ಬದಲಾಗಬೇಕಾದುದು ಇಂದಿನ ಅಗತ್ಯ. ಜನರ ಮನಸ್ಸನ್ನು ಪರಿವರ್ತಿಸುವ, ಜನರಲ್ಲಿ ಜಾಗೃತಿ ಮೂಡಿಸುವಂತಹ ‘ಹಸಿರು ಖಾತರಿ’ ಚಿಂತನೆಯು ಜನರಿಂದಲೇ ಮೂಡಿ ಬಂದಾಗ ಬದಲಾವಣೆ ಖಂಡಿತ ಸಾಧ್ಯವಿದೆ. ಮಳೆ– ಬೆಳೆ ಇಲ್ಲದ, ಬರಗಾಲದ ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಪರಿಸರವನ್ನು ಹಾಳು ಮಾಡಿದ್ದೇವೆ. ಇವೆಲ್ಲ ಇನ್ನಾದರೂ ನಮಗೆ ಅರ್ಥವಾಗಲಿ.