<p class="Briefhead">ಈ ದಿನಗಳಲ್ಲಿ ಯಾವುದೇ ಇಲಾಖೆ, ಕಚೇರಿಯ ಯಾವುದೇ ಕೆಲಸಕ್ಕೆ ಹೋದರೂ ಆಧಾರ್ ಸಂಖ್ಯೆ ಕೇಳುವುದು ಮಾಮೂಲಿಯಾಗಿ ಬಿಟ್ಟಿದೆ. ಜೊತೆಗೆ ಆಧಾರ್ನ ಮಾಹಿತಿಗಳೆಲ್ಲವೂ ಸರಿಯಾಗಿರಬೇಕು. ಸ್ವಲ್ಪ ವ್ಯತ್ಯಾಸ<br />ವಿದ್ದರೂ ಹೊಂದಾಣಿಕೆಯಾಗದೆ ಕೆಲಸ ಆಗುವುದಿಲ್ಲ. ಈ ಕಾರಣದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಆಧಾರ್ನಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸೇವಾ ಕೇಂದ್ರಗಳಾದ ಕೆಲವು ಬ್ಯಾಂಕ್ಗಳಿಗೆ ಎಡತಾಕುತ್ತಿದ್ದಾರೆ. ಬ್ಯಾಂಕುಗಳು ದಿನಕ್ಕೆ 10-15 ಜನರಿಗೆ ಮಾತ್ರ ಈ ಸೇವೆಯನ್ನು<br />ನಿಗದಿಪಡಿಸಿಕೊಂಡಿವೆ. ಅದಕ್ಕೂ ಮುಂಗಡವಾಗಿಎರಡು ದಿನಗಳ ಮುಂಚೆಯೇ ಯಾವ್ಯಾವುದೋ ಸಮಯದಲ್ಲಿ ಟೋಕನ್ ವಿತರಿಸುತ್ತವೆ. ಟೋಕನ್ ಪಡೆಯಲಾಗದವರು ಬ್ಯಾಂಕ್ಗಳಿಗೆ ಅಲೆಯುವಂತಾಗಿದೆ. ವಿದ್ಯಾರ್ಥಿಗಳು, ನೌಕರರು ಕರ್ತವ್ಯದ ಅವಧಿಯಲ್ಲಿ ಬ್ಯಾಂಕ್ ಬಳಿ ಬರಲಾಗುವುದಿಲ್ಲ. ವಯಸ್ಸಾದವರ ಸ್ಥಿತಿ ಕೇಳುವಂತಿಲ್ಲ.</p>.<p>ಆಧಾರ್ನ ವಿವಿಧ ಮಾಹಿತಿಗಳನ್ನು ತಿದ್ದುಪಡಿ ಮಾಡುವ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು. ಬ್ಯಾಂಕ್ನ ಕರ್ತವ್ಯದ ಅವಧಿ ಮುಗಿಯುವವರೆಗೂ ಈ ಪ್ರಕ್ರಿಯೆ ನಡೆಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.</p>.<p>-<strong>ಹೊಳಲು ಶ್ರೀಧರ್,ಮಂಡ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ಈ ದಿನಗಳಲ್ಲಿ ಯಾವುದೇ ಇಲಾಖೆ, ಕಚೇರಿಯ ಯಾವುದೇ ಕೆಲಸಕ್ಕೆ ಹೋದರೂ ಆಧಾರ್ ಸಂಖ್ಯೆ ಕೇಳುವುದು ಮಾಮೂಲಿಯಾಗಿ ಬಿಟ್ಟಿದೆ. ಜೊತೆಗೆ ಆಧಾರ್ನ ಮಾಹಿತಿಗಳೆಲ್ಲವೂ ಸರಿಯಾಗಿರಬೇಕು. ಸ್ವಲ್ಪ ವ್ಯತ್ಯಾಸ<br />ವಿದ್ದರೂ ಹೊಂದಾಣಿಕೆಯಾಗದೆ ಕೆಲಸ ಆಗುವುದಿಲ್ಲ. ಈ ಕಾರಣದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಆಧಾರ್ನಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸೇವಾ ಕೇಂದ್ರಗಳಾದ ಕೆಲವು ಬ್ಯಾಂಕ್ಗಳಿಗೆ ಎಡತಾಕುತ್ತಿದ್ದಾರೆ. ಬ್ಯಾಂಕುಗಳು ದಿನಕ್ಕೆ 10-15 ಜನರಿಗೆ ಮಾತ್ರ ಈ ಸೇವೆಯನ್ನು<br />ನಿಗದಿಪಡಿಸಿಕೊಂಡಿವೆ. ಅದಕ್ಕೂ ಮುಂಗಡವಾಗಿಎರಡು ದಿನಗಳ ಮುಂಚೆಯೇ ಯಾವ್ಯಾವುದೋ ಸಮಯದಲ್ಲಿ ಟೋಕನ್ ವಿತರಿಸುತ್ತವೆ. ಟೋಕನ್ ಪಡೆಯಲಾಗದವರು ಬ್ಯಾಂಕ್ಗಳಿಗೆ ಅಲೆಯುವಂತಾಗಿದೆ. ವಿದ್ಯಾರ್ಥಿಗಳು, ನೌಕರರು ಕರ್ತವ್ಯದ ಅವಧಿಯಲ್ಲಿ ಬ್ಯಾಂಕ್ ಬಳಿ ಬರಲಾಗುವುದಿಲ್ಲ. ವಯಸ್ಸಾದವರ ಸ್ಥಿತಿ ಕೇಳುವಂತಿಲ್ಲ.</p>.<p>ಆಧಾರ್ನ ವಿವಿಧ ಮಾಹಿತಿಗಳನ್ನು ತಿದ್ದುಪಡಿ ಮಾಡುವ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು. ಬ್ಯಾಂಕ್ನ ಕರ್ತವ್ಯದ ಅವಧಿ ಮುಗಿಯುವವರೆಗೂ ಈ ಪ್ರಕ್ರಿಯೆ ನಡೆಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.</p>.<p>-<strong>ಹೊಳಲು ಶ್ರೀಧರ್,ಮಂಡ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>