ಈ ದಿನಗಳಲ್ಲಿ ಯಾವುದೇ ಇಲಾಖೆ, ಕಚೇರಿಯ ಯಾವುದೇ ಕೆಲಸಕ್ಕೆ ಹೋದರೂ ಆಧಾರ್ ಸಂಖ್ಯೆ ಕೇಳುವುದು ಮಾಮೂಲಿಯಾಗಿ ಬಿಟ್ಟಿದೆ. ಜೊತೆಗೆ ಆಧಾರ್ನ ಮಾಹಿತಿಗಳೆಲ್ಲವೂ ಸರಿಯಾಗಿರಬೇಕು. ಸ್ವಲ್ಪ ವ್ಯತ್ಯಾಸ
ವಿದ್ದರೂ ಹೊಂದಾಣಿಕೆಯಾಗದೆ ಕೆಲಸ ಆಗುವುದಿಲ್ಲ. ಈ ಕಾರಣದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಆಧಾರ್ನಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸೇವಾ ಕೇಂದ್ರಗಳಾದ ಕೆಲವು ಬ್ಯಾಂಕ್ಗಳಿಗೆ ಎಡತಾಕುತ್ತಿದ್ದಾರೆ. ಬ್ಯಾಂಕುಗಳು ದಿನಕ್ಕೆ 10-15 ಜನರಿಗೆ ಮಾತ್ರ ಈ ಸೇವೆಯನ್ನು
ನಿಗದಿಪಡಿಸಿಕೊಂಡಿವೆ. ಅದಕ್ಕೂ ಮುಂಗಡವಾಗಿಎರಡು ದಿನಗಳ ಮುಂಚೆಯೇ ಯಾವ್ಯಾವುದೋ ಸಮಯದಲ್ಲಿ ಟೋಕನ್ ವಿತರಿಸುತ್ತವೆ. ಟೋಕನ್ ಪಡೆಯಲಾಗದವರು ಬ್ಯಾಂಕ್ಗಳಿಗೆ ಅಲೆಯುವಂತಾಗಿದೆ. ವಿದ್ಯಾರ್ಥಿಗಳು, ನೌಕರರು ಕರ್ತವ್ಯದ ಅವಧಿಯಲ್ಲಿ ಬ್ಯಾಂಕ್ ಬಳಿ ಬರಲಾಗುವುದಿಲ್ಲ. ವಯಸ್ಸಾದವರ ಸ್ಥಿತಿ ಕೇಳುವಂತಿಲ್ಲ.