ಆದರೆ, ದುರದೃಷ್ಟವಶಾತ್ ಕುಮಾರಸ್ವಾಮಿ ಅವರಿಗೆ ನೆನಪು ಕೊಂಚ ಕೈಕೊಟ್ಟಿರಬೇಕು. ತಾವೇ ಮುಖ್ಯಮಂತ್ರಿಆಗಿದ್ದಾಗ ತಮ್ಮ ಪಕ್ಷದ ಒಬ್ಬ ನಾಯಕರು, ಸುಮಲತಾ ಅಂಬರೀಷ್ ಅವರ ಬಗ್ಗೆ ‘ಆಕೆ ಗೌಡ್ತಿ ಅಲ್ಲ, ನಾಯ್ಡು’ ಎಂದು ಹೇಳಿದ್ದರು. ಈ ಮೂಲಕ, ಮಂಡ್ಯದ ಜನರನ್ನು ಜಾತಿವಾದಿಗಳನ್ನಾಗಿಸಿ, ಮಂಡ್ಯವು ಒಕ್ಕಲಿಗರ ಸಾಮ್ರಾಜ್ಯ ಎಂಬ ಭಾವನೆ ಹುಟ್ಟುಹಾಕಲು ಪ್ರಯತ್ನಿಸಿದ್ದರು. ಇದು ಆಗ ಎಚ್ಡಿಕೆ ಅವರ ಗಮನಕ್ಕೆ ಯಾಕೆ ಬರಲಿಲ್ಲ? ಈಗ ಇವರು ಯಡಿಯೂರಪ್ಪ ಅವರ ವಿರುದ್ಧ ದೂರು ಕೊಡುವುದು ಸರಿಯೇ? ಮಂಡ್ಯ ಜನ ಈ ಜಾತಿವಾದಿ ಹುನ್ನಾರಕ್ಕೆ ಬಲಿಯಾಗದೆ ಸುಮಲತಾ ಅವರನ್ನು ಗೆಲ್ಲಿಸಿದ್ದು ನಾಡಿನ ಹೆಮ್ಮೆಯೇ ಸರಿ.