ನಮ್ಮ ದೇಶದ ಹಳ್ಳಿಗಳಿಗೆ ಆಂಬುಲೆನ್ಸ್ ಸೌಲಭ್ಯ ಇಲ್ಲ. ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇರುವ ಹಳ್ಳಿಗಳಿವೆ. ಕೆಲವು ಹಳ್ಳಿಗಳಲ್ಲಿ ಮೃತದೇಹವನ್ನು ಆ ಹಳ್ಳಿಯಿಂದ ಸ್ಮಶಾನಕ್ಕೆ ಒಯ್ಯಬೇಕಾದರೆ ಬಿದಿರಿನ ಚಟ್ಟ ಬಳಸಿ, ಹೆಗಲ ಮೇಲೆ ನಾಲ್ಕು ಜನ ಮೂರ್ನಾಲ್ಕು ಕಿ.ಮೀ. ಹೊತ್ತೊಯ್ಯಬೇಕು. ಆ ಸಮಯದಲ್ಲಿ ಆ ನಾಲ್ಕು ಜನ ಬದಲಾವಣೆ ಆಗುತ್ತ ಸಾಗಲು ಎಂಟು ಜನ ಬೇಕಾಗುತ್ತದೆ. ಪುರೋಹಿತರು, ಕಟ್ಟಿಗೆ ಒಯ್ಯುವವರು, ಸಂಪ್ರದಾಯ ಪಾಲಿಸುವ ಕುಟುಂಬದ ಜನ ಸೇರಿದಂತೆ ಇಪ್ಪತ್ತು ಜನರಾದರೂ ಆಗೇ ಆಗುತ್ತಾರೆ.