‘ಎದೆ ಸೀಳಿದರೆ ಒಂದಕ್ಷರ ಇಲ್ಲದವರನ್ನು, ಪಂಕ್ಚರ್ ಹಾಕುವವರನ್ನು ಸೇರಿಸಿಕೊಂಡು ಗಲಭೆಮಾಡಿಸಲಾಗುತ್ತಿದೆ’ ಎಂದು ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹೇಳಿದ್ದಾರೆ (ಪ್ರ.ವಾ., ಡಿ. 23). ಹೌದು, ಅವರು ಸರಿಯಾಗಿಯೇ ಹೇಳಿದ್ದಾರೆ. ಅನಕ್ಷರಸ್ಥರು ಎಂದೂ ಅಮಾಯಕರೇ. ಅವರು ಏನೇ ಮಾಡಿದರೂ ಸಿಕ್ಕಿಬೀಳುತ್ತಾರೆ. ಆದರೆ, ಓದಿದವರು ಏನೇ ಮಾಡಿದರೂ ಜಾಣ್ಮೆಯಿಂದ ನಿಭಾಯಿಸುತ್ತಾರೆ! ಖಂಡಿತ ಅವರು ಸಿಕ್ಕಿಬೀಳಲಾರರು. ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡಬೇಕಾದ ಮತ್ತು ಅವರ ಬದುಕನ್ನು ಹಸನುಗೊಳಿಸಬೇಕಾದ ಜವಾಬ್ದಾರಿಯ ಅರಿವು ಹಾಗೂ ಸಾಮಾಜಿಕ ಕಳಕಳಿ ಇರಬೇಕು.