ಸಚಿವರಾಗುವುದಕ್ಕೂ ಮೊದಲು ರೈತರ ಪರವಾಗಿ ವಿಧಾನಸಭೆಯಲ್ಲಿ ಮನಮಿಡಿಯುವಂತೆ ಇವರು ಮಾತನಾಡಿದ್ದರು. ಈಗ, ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿದ ರೈತ ಸಂಘದವರನ್ನು ದೂರ ಕಳುಹಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ‘ನೆವವು ಏನಾದರೇನು, ಸುಲಿಗೆ ರೈತನದು, ಎಲ್ಲರೂ ಜಿಗಣೆಗಳೇ ಆತನ ನೆತ್ತರಿಗೆ’ ಎಂದು ರಾಷ್ಟ್ರಕವಿ ಕುವೆಂಪು ಎಂದೋ ಹೇಳಿದ ಮಾತುಗಳು ಈಗಲೂ ಪ್ರಸ್ತುತವಾಗಿರುವುದು, ನಮ್ಮ ಅನ್ನದಾತನ ದುರ್ದೈವವೇ ಸರಿ.