<p>ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳು ಸ್ವಾಗತಾರ್ಹ. ಆದರೆ ಕರ್ನಾಟಕ ಎಂದರೆ ಕೇವಲ ಬೆಂಗಳೂರಲ್ಲ, ಸಾವಿರಾರು ಹಳ್ಳಿಗಳಿರುವ ವಿಶಾಲವಾದ ಭೂಪ್ರದೇಶ ಎಂಬ ಎಚ್ಚರದಿಂದ ನೂತನ ನಿಯಮಾವಳಿಗಳನ್ನು ಜಾರಿಗೆ ತರಬೇಕು.</p>.<p>ನಮ್ಮ ದೇಶದ ಹಳ್ಳಿಗಳಿಗೆ ಆಂಬುಲೆನ್ಸ್ ಸೌಲಭ್ಯ ಇಲ್ಲ. ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇರುವ ಹಳ್ಳಿಗಳಿವೆ. ಕೆಲವು ಹಳ್ಳಿಗಳಲ್ಲಿ ಮೃತದೇಹವನ್ನು ಆ ಹಳ್ಳಿಯಿಂದ ಸ್ಮಶಾನಕ್ಕೆ ಒಯ್ಯಬೇಕಾದರೆ ಬಿದಿರಿನ ಚಟ್ಟ ಬಳಸಿ, ಹೆಗಲ ಮೇಲೆ ನಾಲ್ಕು ಜನ ಮೂರ್ನಾಲ್ಕು ಕಿ.ಮೀ. ಹೊತ್ತೊಯ್ಯಬೇಕು. ಆ ಸಮಯದಲ್ಲಿ ಆ ನಾಲ್ಕು ಜನ ಬದಲಾವಣೆ ಆಗುತ್ತ ಸಾಗಲು ಎಂಟು ಜನ ಬೇಕಾಗುತ್ತದೆ. ಪುರೋಹಿತರು, ಕಟ್ಟಿಗೆ ಒಯ್ಯುವವರು, ಸಂಪ್ರದಾಯ ಪಾಲಿಸುವ ಕುಟುಂಬದ ಜನ ಸೇರಿದಂತೆ ಇಪ್ಪತ್ತು ಜನರಾದರೂ ಆಗೇ ಆಗುತ್ತಾರೆ.</p>.<p>ವಾಸ್ತವ ಹೀಗಿರುವಾಗ, ಅಂತಿಮ ಯಾತ್ರೆಗೆ ಕೇವಲ ಐದು ಜನರ ನಿರ್ಬಂಧ ಸರಿಯಲ್ಲ. ಕೆಲವು ಸಂದರ್ಭಗಳಲ್ಲಿ, ಅಸುನೀಗಿದವರ ಮಕ್ಕಳ ಸಂಖ್ಯೆಯೇ ಐದು ಅಂಕೆ ದಾಟಿರುತ್ತದೆ! ಇವೆಲ್ಲವನ್ನೂ ಪರಿಗಣಿಸಿ ಕನಿಷ್ಠ ಹದಿನೈದು ಜನಕ್ಕಾದರೂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು.</p>.<p><em><strong>-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳು ಸ್ವಾಗತಾರ್ಹ. ಆದರೆ ಕರ್ನಾಟಕ ಎಂದರೆ ಕೇವಲ ಬೆಂಗಳೂರಲ್ಲ, ಸಾವಿರಾರು ಹಳ್ಳಿಗಳಿರುವ ವಿಶಾಲವಾದ ಭೂಪ್ರದೇಶ ಎಂಬ ಎಚ್ಚರದಿಂದ ನೂತನ ನಿಯಮಾವಳಿಗಳನ್ನು ಜಾರಿಗೆ ತರಬೇಕು.</p>.<p>ನಮ್ಮ ದೇಶದ ಹಳ್ಳಿಗಳಿಗೆ ಆಂಬುಲೆನ್ಸ್ ಸೌಲಭ್ಯ ಇಲ್ಲ. ಜಾತಿಗೊಂದು, ಧರ್ಮಕ್ಕೊಂದು ಸ್ಮಶಾನ ಇರುವ ಹಳ್ಳಿಗಳಿವೆ. ಕೆಲವು ಹಳ್ಳಿಗಳಲ್ಲಿ ಮೃತದೇಹವನ್ನು ಆ ಹಳ್ಳಿಯಿಂದ ಸ್ಮಶಾನಕ್ಕೆ ಒಯ್ಯಬೇಕಾದರೆ ಬಿದಿರಿನ ಚಟ್ಟ ಬಳಸಿ, ಹೆಗಲ ಮೇಲೆ ನಾಲ್ಕು ಜನ ಮೂರ್ನಾಲ್ಕು ಕಿ.ಮೀ. ಹೊತ್ತೊಯ್ಯಬೇಕು. ಆ ಸಮಯದಲ್ಲಿ ಆ ನಾಲ್ಕು ಜನ ಬದಲಾವಣೆ ಆಗುತ್ತ ಸಾಗಲು ಎಂಟು ಜನ ಬೇಕಾಗುತ್ತದೆ. ಪುರೋಹಿತರು, ಕಟ್ಟಿಗೆ ಒಯ್ಯುವವರು, ಸಂಪ್ರದಾಯ ಪಾಲಿಸುವ ಕುಟುಂಬದ ಜನ ಸೇರಿದಂತೆ ಇಪ್ಪತ್ತು ಜನರಾದರೂ ಆಗೇ ಆಗುತ್ತಾರೆ.</p>.<p>ವಾಸ್ತವ ಹೀಗಿರುವಾಗ, ಅಂತಿಮ ಯಾತ್ರೆಗೆ ಕೇವಲ ಐದು ಜನರ ನಿರ್ಬಂಧ ಸರಿಯಲ್ಲ. ಕೆಲವು ಸಂದರ್ಭಗಳಲ್ಲಿ, ಅಸುನೀಗಿದವರ ಮಕ್ಕಳ ಸಂಖ್ಯೆಯೇ ಐದು ಅಂಕೆ ದಾಟಿರುತ್ತದೆ! ಇವೆಲ್ಲವನ್ನೂ ಪರಿಗಣಿಸಿ ಕನಿಷ್ಠ ಹದಿನೈದು ಜನಕ್ಕಾದರೂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು.</p>.<p><em><strong>-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>