ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಇದು ಲಾಕ್‌ಡೌನ್‌ ಮನರಂಜನೆ!

Last Updated 28 ಮೇ 2021, 17:23 IST
ಅಕ್ಷರ ಗಾತ್ರ

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದಾಗ, ರಾಜಕೀಯ ಇಷ್ಟು ಕೀಳುಮಟ್ಟಕ್ಕೆ ತಲುಪಿತೇ ಎನಿಸುತ್ತದೆ. ಸರ್ಕಾರದ ಭಾಗವಾಗಿರುವ ಒಬ್ಬ ಹಾಲಿ ಸಚಿವರನ್ನು, ಅದೇ ಪಕ್ಷದ ಹಾಲಿ ಶಾಸಕರೊಬ್ಬರು ‘ಅವನೊಬ್ಬ ಕಳ್ಳ, 420. ಆತ ಭೂ ಹಗರಣದಲ್ಲಿ ಜೈಲಿಗೆ ಹೋಗಬೇಕಿತ್ತು, ನಮ್ಮ ಪಕ್ಷಕ್ಕೆ ಬಂದು ಬಚಾವ್ ಆಗಿದ್ದಾನೆ’ ಎನ್ನುತ್ತಾರೆ.

ಮತ್ತೊಬ್ಬ ಶಾಸಕರು ‘ಇವನು ಪಕ್ಷದಿಂದ ಪಕ್ಷಕ್ಕೆ ಹಾರುವಕಪ್ಪೆ’ ಎಂದು ಜರೆಯುತ್ತಾರೆ. ಹೀಗೆಲ್ಲಾ ಬಾಯಿಗೆ ಬಂದಂತೆ ಮಾತನಾಡುವ ಇವರಿಗೆ, ತಾವು ಹೀಗಳೆಯುತ್ತಿರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಅವರ ಹಿನ್ನೆಲೆ ಗೊತ್ತಿರಲಿಲ್ಲವೇ? ಅಧಿಕಾರಕ್ಕಾಗಿ ನಡೆಯುತ್ತಿರುವ ಈ ಎಲ್ಲಾ ಆಟಗಳು ಸಾರ್ವಜನಿಕರಿಗಾಗಿ ನಡೆಯುತ್ತಿರುವ ‘ಲಾಕ್‌ಡೌನ್ ಮನರಂಜನೆ’.
-ಬೂಕನಕೆರೆ ವಿಜೇಂದ್ರ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT