ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದಾಗ, ರಾಜಕೀಯ ಇಷ್ಟು ಕೀಳುಮಟ್ಟಕ್ಕೆ ತಲುಪಿತೇ ಎನಿಸುತ್ತದೆ. ಸರ್ಕಾರದ ಭಾಗವಾಗಿರುವ ಒಬ್ಬ ಹಾಲಿ ಸಚಿವರನ್ನು, ಅದೇ ಪಕ್ಷದ ಹಾಲಿ ಶಾಸಕರೊಬ್ಬರು ‘ಅವನೊಬ್ಬ ಕಳ್ಳ, 420. ಆತ ಭೂ ಹಗರಣದಲ್ಲಿ ಜೈಲಿಗೆ ಹೋಗಬೇಕಿತ್ತು, ನಮ್ಮ ಪಕ್ಷಕ್ಕೆ ಬಂದು ಬಚಾವ್ ಆಗಿದ್ದಾನೆ’ ಎನ್ನುತ್ತಾರೆ.