ಆದರೆ, ಆ ಪುಸ್ತಕಗಳಿಗೆ ನಿಗದಿಯಾದ ಹಣವನ್ನು ಸಂಬಂಧಪಟ್ಟವರ ಬ್ಯಾಂಕ್ ಖಾತೆಗೆ ಇದುವರೆಗೂ ಜಮಾ ಮಾಡಿಲ್ಲ. ಅನೇಕ ಪುಸ್ತಕಗಳಿಗೆ ಆರ್ಥಿಕವಾಗಿ ಸುಸ್ಥಿತಿಯಲ್ಲಿರದ ಲೇಖಕರೇ ಪ್ರಕಾಶಕರಾಗಿದ್ದಾರೆ. ಸಾಲಸೋಲ ಮಾಡಿ ಪುಸ್ತಕಗಳನ್ನು ಪ್ರಕಟಿಸಿ ಮೂರು ವರ್ಷಗಳಿಂದಲೂ ಸರ್ಕಾರದ ನೆರವಿಗಾಗಿ ಕಾಯುತ್ತಿದ್ದಾರೆ. ಇಲಾಖೆ ಇನ್ನಾದರೂ ಈ ಬಗ್ಗೆ ಗಮನಹರಿಸಿ, ಬಾಕಿ ಹಣವನ್ನು ಕೂಡಲೇ ಸಂದಾಯ ಮಾಡಲಿ.
–ಬಿ.ಎಸ್.ಮನೋಹರ್,ಬೆಂಗಳೂರು