<p class="Briefhead">ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ದಕ್ಷ ಮತ್ತು ಸೇವಾ ತುಡಿತ ಇರುವ ಅಧಿಕಾರಿ ಎಂಬುದನ್ನು ತಮ್ಮ 11 ವರ್ಷಗಳ ಸೇವಾವಧಿಯಲ್ಲಿ ಸಾಬೀತುಪಡಿಸಿದ್ದಾರೆ. ಈಗ ಮೈಸೂರು ಜಿಲ್ಲೆಯಲ್ಲಿ ಅವರು 24×7 ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ. ಆದರೂ ಕೆಲವು ಶಾಸಕರು, ಸಂಸದರು ಇವರ ವಿರುದ್ಧ ಮುಗಿಬೀಳುತ್ತಿದ್ದಾರೆ.</p>.<p>ಚಾಮರಾಜನಗರದಲ್ಲಿ 24 ಮಂದಿ ಕೋವಿಡ್ಪೀಡಿತರು ಸಕಾಲದಲ್ಲಿ ಆಕ್ಸಿಜನ್ ಲಭ್ಯವಾಗದೆ ಸತ್ತಾಗ ಅದಕ್ಕೆ ರೋಹಿಣಿಯವರೇ ಕಾರಣವೆಂದರು, ಇವರನ್ನು ಎತ್ತಂಗಡಿ ಮಾಡಿ ಎಂದರು, ನಾವು ಎದುರಿಸುವ ಒಂದೊಂದು ಚುನಾವಣೆ ಒಂದೊಂದು ಐಎಎಸ್ ಪರೀಕ್ಷೆಗೆ ಸಮ ಎಂದರು, ಜಿಲ್ಲೆಯಲ್ಲಿ ರಚನೆಗೊಂಡ ಕ್ರಿಯಾಪಡೆಗೆ ಜಿಲ್ಲಾಧಿಕಾರಿಯ ಹೆಸರೇ ಬೇಡವೆಂದರು. ಜೊತೆಗೆ ಇವರು ತಾಸುಗಟ್ಟಲೆ ಅಧಿಕಾರಿಗಳ ಸಭೆ ನಡೆಸುವ ಬದಲು ಹಳ್ಳಿಗಳಿಗೆ ಭೇಟಿ ನೀಡಲಿ ಎನ್ನುತ್ತಿದ್ದಾರೆ. ಅಂದರೆ ಈ ಅಧಿಕಾರಿ ಅವರ ಅಧಿಕಾರ ಚಲಾಯಿಸಲು, ಆಡಳಿತ ನಡೆಸಲು ಶಾಸಕರಿಗೆ, ಸಂಸದರಿಗೆ ಹೊಂದಿಕೊಂಡು ನಡೆಯಬೇಕೇ? ಈ ಜಿಲ್ಲಾಧಿಕಾರಿಯ ಬಗ್ಗೆ ಇಲ್ಲಿನ ನಾಗರಿಕರಿಗೆ ಏನೇನೂ ತಕರಾರಿಲ್ಲ. ಇರುವುದು ರಾಜಕಾರಣಿಗಳಿಂದ ಮಾತ್ರ. ಇದಕ್ಕೆ ಏನೆನ್ನುವುದು?</p>.<p><em><strong>-ಎಂ.ಕೆ.ವಾಸುದೇವರಾಜು,<span class="Designate"> ಮೈಸೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ದಕ್ಷ ಮತ್ತು ಸೇವಾ ತುಡಿತ ಇರುವ ಅಧಿಕಾರಿ ಎಂಬುದನ್ನು ತಮ್ಮ 11 ವರ್ಷಗಳ ಸೇವಾವಧಿಯಲ್ಲಿ ಸಾಬೀತುಪಡಿಸಿದ್ದಾರೆ. ಈಗ ಮೈಸೂರು ಜಿಲ್ಲೆಯಲ್ಲಿ ಅವರು 24×7 ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ. ಆದರೂ ಕೆಲವು ಶಾಸಕರು, ಸಂಸದರು ಇವರ ವಿರುದ್ಧ ಮುಗಿಬೀಳುತ್ತಿದ್ದಾರೆ.</p>.<p>ಚಾಮರಾಜನಗರದಲ್ಲಿ 24 ಮಂದಿ ಕೋವಿಡ್ಪೀಡಿತರು ಸಕಾಲದಲ್ಲಿ ಆಕ್ಸಿಜನ್ ಲಭ್ಯವಾಗದೆ ಸತ್ತಾಗ ಅದಕ್ಕೆ ರೋಹಿಣಿಯವರೇ ಕಾರಣವೆಂದರು, ಇವರನ್ನು ಎತ್ತಂಗಡಿ ಮಾಡಿ ಎಂದರು, ನಾವು ಎದುರಿಸುವ ಒಂದೊಂದು ಚುನಾವಣೆ ಒಂದೊಂದು ಐಎಎಸ್ ಪರೀಕ್ಷೆಗೆ ಸಮ ಎಂದರು, ಜಿಲ್ಲೆಯಲ್ಲಿ ರಚನೆಗೊಂಡ ಕ್ರಿಯಾಪಡೆಗೆ ಜಿಲ್ಲಾಧಿಕಾರಿಯ ಹೆಸರೇ ಬೇಡವೆಂದರು. ಜೊತೆಗೆ ಇವರು ತಾಸುಗಟ್ಟಲೆ ಅಧಿಕಾರಿಗಳ ಸಭೆ ನಡೆಸುವ ಬದಲು ಹಳ್ಳಿಗಳಿಗೆ ಭೇಟಿ ನೀಡಲಿ ಎನ್ನುತ್ತಿದ್ದಾರೆ. ಅಂದರೆ ಈ ಅಧಿಕಾರಿ ಅವರ ಅಧಿಕಾರ ಚಲಾಯಿಸಲು, ಆಡಳಿತ ನಡೆಸಲು ಶಾಸಕರಿಗೆ, ಸಂಸದರಿಗೆ ಹೊಂದಿಕೊಂಡು ನಡೆಯಬೇಕೇ? ಈ ಜಿಲ್ಲಾಧಿಕಾರಿಯ ಬಗ್ಗೆ ಇಲ್ಲಿನ ನಾಗರಿಕರಿಗೆ ಏನೇನೂ ತಕರಾರಿಲ್ಲ. ಇರುವುದು ರಾಜಕಾರಣಿಗಳಿಂದ ಮಾತ್ರ. ಇದಕ್ಕೆ ಏನೆನ್ನುವುದು?</p>.<p><em><strong>-ಎಂ.ಕೆ.ವಾಸುದೇವರಾಜು,<span class="Designate"> ಮೈಸೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>