ವಾಚಕರವಾಣಿ: ವ್ಯರ್ಥ ಕಸರತ್ತು ಏಕೆ?
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯಂಥ ಉನ್ನತ ಹುದ್ದೆಗಳಿಗೆ ಚುನಾವಣೆ ಘೋಷಣೆಯಾದಾಗ ವಿರೋಧ ಪಕ್ಷಗಳು ತಮಗೆ ಸಂಖ್ಯಾಬಲ ಇಲ್ಲದೇ ಇದ್ದ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದರಿಂದ ಸಾಧಿಸುವುದು ಏನೂ ಇರುವುದಿಲ್ಲ. ಅದರ ಬದಲು, ಒಮ್ಮತದ ಆಯ್ಕೆಗೆ ಅವಕಾಶ ಮಾಡಿಕೊಡುವ ಮೂಲಕ ಈ ಹುದ್ದೆಗಳ ಘನತೆ ಹೆಚ್ಚಿಸುವುದು ಒಳಿತು.
ಮತದಾನಕ್ಕೆ ಮೊದಲೇ ಫಲಿತಾಂಶದ ಹಣೆಬರಹ ಗೊತ್ತಿರಬೇಕಾದರೆ ಕಣಕ್ಕೆ ಇಳಿಸಿ, ಮತಯಾಚನೆಯ ಕಸರತ್ತು ನಡೆಸುವುದರಲ್ಲಿ ಹೆಚ್ಚಿನ ಅರ್ಥ ಇರುವುದಿಲ್ಲ. ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳ್ಳಲು ಇಂತಹ ಚುನಾವಣೆಗಳು ಯಾವುದೇ ರೀತಿಯಲ್ಲೂ ನೆರವಾಗುವುದಿಲ್ಲ.
- ಕೆ.ಪಿ. ವಿಷ್ಣುವರ್ಧನ, ಕೊಡಗವಳ್ಳಿ ಹಟ್ಟಿ, ಹೊಳಲ್ಕೆರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.