ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯಂಥ ಉನ್ನತ ಹುದ್ದೆಗಳಿಗೆ ಚುನಾವಣೆ ಘೋಷಣೆಯಾದಾಗ ವಿರೋಧ ಪಕ್ಷಗಳು ತಮಗೆ ಸಂಖ್ಯಾಬಲ ಇಲ್ಲದೇ ಇದ್ದ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದರಿಂದ ಸಾಧಿಸುವುದು ಏನೂ ಇರುವುದಿಲ್ಲ. ಅದರ ಬದಲು, ಒಮ್ಮತದ ಆಯ್ಕೆಗೆ ಅವಕಾಶ ಮಾಡಿಕೊಡುವ ಮೂಲಕ ಈ ಹುದ್ದೆಗಳ ಘನತೆ ಹೆಚ್ಚಿಸುವುದು ಒಳಿತು.