ಉತ್ತರ ಕನ್ನಡ ಜಿಲ್ಲೆಯ ವಿಭಜನೆಯ ಮಾತು ಇಂದು ನಿನ್ನೆಯದಲ್ಲ. ಶಿರಸಿ– ಸಿದ್ದಾಪುರದವರು ಮತ್ತೊಂದು ಜಿಲ್ಲೆಗೆ ಬೇಡಿಕೆ ಇಡುವುದು ಹಾಗೂ ಕರಾವಳಿ ಭಾಗದವರು ವಿಭಜನೆ ಬೇಡವೆಂದು ಹೇಳುವುದು ಹಲವಾರು ವರ್ಷಗಳಿಂದಕೇಳಿಬರುತ್ತಿದೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಯವರು ಉತ್ತರ ಕನ್ನಡ ಜಿಲ್ಲೆ ವಿಭಜನೆ ಆಗಲಿ ಅಂತ ಅಂಕೋಲಾದಲ್ಲಿ ಹೇಳಿ ಹೋಗಿದ್ದಾರೆ. ಇದಕ್ಕೆ ಟೀಕೆಗಳು ಕೂಡ ಬಂದಿವೆ.