ಮಾತೆತ್ತಿದ್ದರೆ, ಉತ್ತರಪ್ರದೇಶದ ‘ಯೋಗಿ ಮಾದರಿ’ ಆಡಳಿತದ ಬಗೆಗೆ ಪ್ರಸ್ತಾಪಿಸುತ್ತಾರೆ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅಪರಾಧ ಕೃತ್ಯಗಳನ್ನು ನಿಗ್ರಹಿಸಲು ಅವರ ಮಾದರಿಯೇ ಬೇಕೆ? ಅದಕ್ಕೆ ತಮ್ಮದೇ ಸ್ವಂತ ಮಾಡೆಲ್ ಯಾವುದೂ ಇಲ್ಲವೇ? ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಮೂರು ಹತ್ಯೆಗಳಾಗಿರುವುದು ಗೃಹ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬರೀ ಹೇಳಿಕೆ ನೀಡಿ ಸುಮ್ಮನಾಗದೆ, ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ. ಅದಕ್ಕಾಗಿ ಎರವಲು ಮಾದರಿ ಅನುಸರಿಸುವುದೇನೂ ಬೇಕಾಗಿಲ್ಲ. ಕರ್ನಾಟಕದ ಕಾನೂನು–ಕಟ್ಟಲೆಗಳೇ ಸಾಕು.