ಪ್ರವಾಸೋದ್ಯಮದ ಹೆಸರಿನಲ್ಲಿ ಅನಧಿಕೃತ ರೆಸಾರ್ಟ್ ಗಳು, ಹೋಮ್ ಸ್ಟೇಗಳು, ಅಕ್ರಮ ಮರಳು ದಂಧೆ, ಕಲ್ಲು ಕ್ವಾರಿ, ಅಕೇಶಿಯಾ- ನೀಲಗಿರಿ ಮರಗಳು, ಶುಂಠಿ ಬೆಳೆ ಎಲ್ಲವೂ ಧನದ ದಾಹಕ್ಕೆ ಮಲೆನಾಡ ಮಗ್ಗುಲನ್ನೇ ಮುರಿ ದಿವೆ. ದೈತ್ಯ ಜೆಸಿಬಿ ಯಂತ್ರಗಳು, ಕೊಳವೆಬಾವಿ ಕೊರೆಯುವ ಬೋರ್ವೆಲ್ ಲಾರಿಗಳು ಜನರ ನಿದ್ದೆಗೆಡಿಸಿವೆ. ಇವೆಲ್ಲವೂ ಅಧಿಕಾರಶಾಹಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುತ್ತಿರುವುದು ವಿಷಾದನೀಯ.