<p>ಮಲೆನಾಡಿನ ಸೊಬಗು ನೇಪಥ್ಯಕ್ಕೆ ಸರಿದ ಬಗೆಯನ್ನು ವಿವರಿಸಿರುವ ಸತೀಶ್ ಜಿ.ಕೆ. ತೀರ್ಥಹಳ್ಳಿ ಅವರ ಲೇಖನ (ಸಂಗತ, ಮಾರ್ಚ್ 13) ಸಕಾಲಿಕವಾಗಿದ್ದು, ಎಚ್ಚರಿಕೆಯ ಗಂಟೆಯಂತಿದೆ. ಶಿವಮೊಗ್ಗ- ತೀರ್ಥಹಳ್ಳಿ ನಡುವೆ ರಸ್ತೆಯ ಇಕ್ಕೆಲಗಳಲ್ಲೂ ಹಸಿರು ಹೊದ್ದ ಗಿಡಮರಗಳು ಕಣ್ಮರೆಯಾಗಿದ್ದು ಒಂದು ಉದಾಹರಣೆ ಮಾತ್ರ. ಈ ತರಹ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಸೊರಬ ತಾಲ್ಲೂಕುಗಳಲ್ಲಿ ಅದೆಷ್ಟೋ ಹಸಿರು ಕಾಣೆಯಾಗಿದೆ.</p>.<p>ಪ್ರವಾಸೋದ್ಯಮದ ಹೆಸರಿನಲ್ಲಿ ಅನಧಿಕೃತ ರೆಸಾರ್ಟ್ ಗಳು, ಹೋಮ್ ಸ್ಟೇಗಳು, ಅಕ್ರಮ ಮರಳು ದಂಧೆ, ಕಲ್ಲು ಕ್ವಾರಿ, ಅಕೇಶಿಯಾ- ನೀಲಗಿರಿ ಮರಗಳು, ಶುಂಠಿ ಬೆಳೆ ಎಲ್ಲವೂ ಧನದ ದಾಹಕ್ಕೆ ಮಲೆನಾಡ ಮಗ್ಗುಲನ್ನೇ ಮುರಿ ದಿವೆ. ದೈತ್ಯ ಜೆಸಿಬಿ ಯಂತ್ರಗಳು, ಕೊಳವೆಬಾವಿ ಕೊರೆಯುವ ಬೋರ್ವೆಲ್ ಲಾರಿಗಳು ಜನರ ನಿದ್ದೆಗೆಡಿಸಿವೆ. ಇವೆಲ್ಲವೂ ಅಧಿಕಾರಶಾಹಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುತ್ತಿರುವುದು ವಿಷಾದನೀಯ.</p>.<p>ನಗರ ಗುರುದೇವ್ ಭಂಡಾರ್ಕರ್, ಹೊಸನಗರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲೆನಾಡಿನ ಸೊಬಗು ನೇಪಥ್ಯಕ್ಕೆ ಸರಿದ ಬಗೆಯನ್ನು ವಿವರಿಸಿರುವ ಸತೀಶ್ ಜಿ.ಕೆ. ತೀರ್ಥಹಳ್ಳಿ ಅವರ ಲೇಖನ (ಸಂಗತ, ಮಾರ್ಚ್ 13) ಸಕಾಲಿಕವಾಗಿದ್ದು, ಎಚ್ಚರಿಕೆಯ ಗಂಟೆಯಂತಿದೆ. ಶಿವಮೊಗ್ಗ- ತೀರ್ಥಹಳ್ಳಿ ನಡುವೆ ರಸ್ತೆಯ ಇಕ್ಕೆಲಗಳಲ್ಲೂ ಹಸಿರು ಹೊದ್ದ ಗಿಡಮರಗಳು ಕಣ್ಮರೆಯಾಗಿದ್ದು ಒಂದು ಉದಾಹರಣೆ ಮಾತ್ರ. ಈ ತರಹ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಸೊರಬ ತಾಲ್ಲೂಕುಗಳಲ್ಲಿ ಅದೆಷ್ಟೋ ಹಸಿರು ಕಾಣೆಯಾಗಿದೆ.</p>.<p>ಪ್ರವಾಸೋದ್ಯಮದ ಹೆಸರಿನಲ್ಲಿ ಅನಧಿಕೃತ ರೆಸಾರ್ಟ್ ಗಳು, ಹೋಮ್ ಸ್ಟೇಗಳು, ಅಕ್ರಮ ಮರಳು ದಂಧೆ, ಕಲ್ಲು ಕ್ವಾರಿ, ಅಕೇಶಿಯಾ- ನೀಲಗಿರಿ ಮರಗಳು, ಶುಂಠಿ ಬೆಳೆ ಎಲ್ಲವೂ ಧನದ ದಾಹಕ್ಕೆ ಮಲೆನಾಡ ಮಗ್ಗುಲನ್ನೇ ಮುರಿ ದಿವೆ. ದೈತ್ಯ ಜೆಸಿಬಿ ಯಂತ್ರಗಳು, ಕೊಳವೆಬಾವಿ ಕೊರೆಯುವ ಬೋರ್ವೆಲ್ ಲಾರಿಗಳು ಜನರ ನಿದ್ದೆಗೆಡಿಸಿವೆ. ಇವೆಲ್ಲವೂ ಅಧಿಕಾರಶಾಹಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುತ್ತಿರುವುದು ವಿಷಾದನೀಯ.</p>.<p>ನಗರ ಗುರುದೇವ್ ಭಂಡಾರ್ಕರ್, ಹೊಸನಗರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>