ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಲ್ಯಾಣ ಮಂಟಪ ಬೇಕು

Last Updated 3 ಸೆಪ್ಟೆಂಬರ್ 2019, 8:57 IST
ಅಕ್ಷರ ಗಾತ್ರ

ದೊಡ್ಡ ಛತ್ರದಲ್ಲಿ ವೈಭವದಿಂದ ತಮ್ಮ ಮದುವೆ ನಡೆಯಬೇಕೆಂದು ಹಲವರು ಬಯಸುತ್ತಾರೆ. ಹಣ ಉಳ್ಳವರು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾ ದೊಡ್ಡ ಛತ್ರಗಳಲ್ಲಿ ತಮ್ಮ ಮಕ್ಕಳ ವಿವಾಹ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದವರು ಗಂಡಿನ ಮನೆಯವರನ್ನು ಮೆಚ್ಚಿಸುವುದಕ್ಕಾಗಿ, ಕೂಡಿಟ್ಟ ಹಣದ ಜೊತೆಗೆ ಸಾಲ ಮಾಡಿಯಾದರೂ ದೊಡ್ಡ ಛತ್ರದಲ್ಲಿ ಮಕ್ಕಳ ಮದುವೆ ಮಾಡಿಕೊಟ್ಟು, ಸಾಲಗಾರರಾಗಿ ಜೀವನಪರ್ಯಂತ ಕಷ್ಟಪಡುತ್ತಾರೆ. ಸರಳ ವಿವಾಹವನ್ನು ಬಹುತೇಕ ಗಂಡಿನ ಮನೆಯವರು ಒಪ್ಪುವುದಿಲ್ಲ. ಇಂತಹ ಸಾಮಾನ್ಯ ವರ್ಗದವರ ಹಿತದೃಷ್ಟಿಯಿಂದ ಸರ್ಕಾರವು ಕಲ್ಯಾಣ ಮಂಟಪಗಳನ್ನು ನಿರ್ಮಿಸಿ ರಿಯಾಯಿತಿ ದರದಲ್ಲಿ ಬಳಕೆಗೆ ನೀಡಬೇಕು.

-ಎಂ.ಎಸ್.ಉಷಾ ಪ್ರಕಾಶ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT