ಶಾಸಕರು ಮತ್ತು ಸಂಸದರಿಗೆ ಸಂವಿಧಾನದತ್ತವಾಗಿ ನೀಡಿರುವ ರಾಜೀನಾಮೆಯ ಹಕ್ಕನ್ನು ಮೊಟಕುಗೊಳಿಸದೆ, ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬುದನ್ನು ವಿಧಾನಸಭೆ ಹಾಗೂ ಲೋಕಸಭೆ ಮನಗಾಣಬೇಕು. ರಾಷ್ಟ್ರ, ರಾಜ್ಯ, ಭಾಷೆ, ಸಮುದಾಯದ ಹಿತಕ್ಕಾಗಿ ಅಥವಾ ಜನಕಲ್ಯಾಣದ ದೃಷ್ಟಿಯಿಂದ ಕೊಟ್ಟಿದ್ದರೆ ಮಾತ್ರ ಆ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು. ಆಗ ಇಂತಹ ಸದುದ್ದೇಶದ ಕುರುಹಾಗಿ ವಿಧಾನಸಭೆ ಹಾಗೂ ಸಂಸತ್ತಿನ ಪ್ರಾಂಗಣದಲ್ಲಿ ಇಂತಹ ಜನಪ್ರತಿನಿಧಿಗಳ ಭಾವಚಿತ್ರ ಅನಾವರಣ ಮಾಡಬೇಕು.