<p>ಶಾಸಕರು ಮತ್ತು ಸಂಸದರಿಗೆ ಸಂವಿಧಾನದತ್ತವಾಗಿ ನೀಡಿರುವ ರಾಜೀನಾಮೆಯ ಹಕ್ಕನ್ನು ಮೊಟಕುಗೊಳಿಸದೆ, ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬುದನ್ನು ವಿಧಾನಸಭೆ ಹಾಗೂ ಲೋಕಸಭೆ ಮನಗಾಣಬೇಕು. ರಾಷ್ಟ್ರ, ರಾಜ್ಯ, ಭಾಷೆ, ಸಮುದಾಯದ ಹಿತಕ್ಕಾಗಿ ಅಥವಾ ಜನಕಲ್ಯಾಣದ ದೃಷ್ಟಿಯಿಂದ ಕೊಟ್ಟಿದ್ದರೆ ಮಾತ್ರ ಆ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು. ಆಗ ಇಂತಹ ಸದುದ್ದೇಶದ ಕುರುಹಾಗಿ ವಿಧಾನಸಭೆ ಹಾಗೂ ಸಂಸತ್ತಿನ ಪ್ರಾಂಗಣದಲ್ಲಿ ಇಂತಹ ಜನಪ್ರತಿನಿಧಿಗಳ ಭಾವಚಿತ್ರ ಅನಾವರಣ ಮಾಡಬೇಕು.</p>.<p>ಈ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ರಾಜೀನಾಮೆ ನೀಡಿದ ವ್ಯಕ್ತಿ ಹಾಗೂ ಅವರ ಕುಟುಂಬದ ಸದಸ್ಯರು, ಸಂಬಂಧಿಕರು<br />ಸ್ಪರ್ಧಿಸುವುದಕ್ಕೆ ನಿರ್ಬಂಧ ಹೇರಬೇಕು. ಆಗ, ಜನಹಿತ ಮರೆತು ಸ್ವಹಿತಾಸಕ್ತಿಗಷ್ಟೇ ಆದ್ಯತೆ ನೀಡುವ ಶಾಸಕರು ಹಾಗೂ ಸಂಸದರು ರಾಜೀನಾಮೆ ಪ್ರಹಸನಕ್ಕೆ ಸ್ವತಃ ತೆರೆ ಎಳೆಯುತ್ತಾರೆ.</p>.<p><em><strong>–ಎಂ.ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಾಸಕರು ಮತ್ತು ಸಂಸದರಿಗೆ ಸಂವಿಧಾನದತ್ತವಾಗಿ ನೀಡಿರುವ ರಾಜೀನಾಮೆಯ ಹಕ್ಕನ್ನು ಮೊಟಕುಗೊಳಿಸದೆ, ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂಬುದನ್ನು ವಿಧಾನಸಭೆ ಹಾಗೂ ಲೋಕಸಭೆ ಮನಗಾಣಬೇಕು. ರಾಷ್ಟ್ರ, ರಾಜ್ಯ, ಭಾಷೆ, ಸಮುದಾಯದ ಹಿತಕ್ಕಾಗಿ ಅಥವಾ ಜನಕಲ್ಯಾಣದ ದೃಷ್ಟಿಯಿಂದ ಕೊಟ್ಟಿದ್ದರೆ ಮಾತ್ರ ಆ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು. ಆಗ ಇಂತಹ ಸದುದ್ದೇಶದ ಕುರುಹಾಗಿ ವಿಧಾನಸಭೆ ಹಾಗೂ ಸಂಸತ್ತಿನ ಪ್ರಾಂಗಣದಲ್ಲಿ ಇಂತಹ ಜನಪ್ರತಿನಿಧಿಗಳ ಭಾವಚಿತ್ರ ಅನಾವರಣ ಮಾಡಬೇಕು.</p>.<p>ಈ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ರಾಜೀನಾಮೆ ನೀಡಿದ ವ್ಯಕ್ತಿ ಹಾಗೂ ಅವರ ಕುಟುಂಬದ ಸದಸ್ಯರು, ಸಂಬಂಧಿಕರು<br />ಸ್ಪರ್ಧಿಸುವುದಕ್ಕೆ ನಿರ್ಬಂಧ ಹೇರಬೇಕು. ಆಗ, ಜನಹಿತ ಮರೆತು ಸ್ವಹಿತಾಸಕ್ತಿಗಷ್ಟೇ ಆದ್ಯತೆ ನೀಡುವ ಶಾಸಕರು ಹಾಗೂ ಸಂಸದರು ರಾಜೀನಾಮೆ ಪ್ರಹಸನಕ್ಕೆ ಸ್ವತಃ ತೆರೆ ಎಳೆಯುತ್ತಾರೆ.</p>.<p><em><strong>–ಎಂ.ಮಂಚಶೆಟ್ಟಿ, ಕಡಿಲುವಾಗಿಲು, ಮದ್ದೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>