ದೆಹಲಿಯಲ್ಲಿನ ಶೈಕ್ಷಣಿಕ ಪ್ರಗತಿಯ ಚಿತ್ರಣವನ್ನು ಡಾ. ಎಚ್.ಬಿ.ಚಂದ್ರಶೇಖರ್ (ಸಂಗತ, ನ. 19) ಕಟ್ಟಿಕೊಟ್ಟಿದ್ದಾರೆ. ಯಾವ ಹಂತದ ಮಕ್ಕಳಿಗೆ ಯಾವ ಬಗೆಯ ಶಿಕ್ಷಣ ಕೊಡಬೇಕು, ಪಠ್ಯಕ್ರಮಗಳು ಹಾಗೂ ಪಠ್ಯದ ವಿಷಯವಸ್ತು ಹೇಗಿರಬೇಕು ಎಂಬುದರ ಬಗ್ಗೆ ಕೂಲಂಕಷ ಚರ್ಚೆ ಮತ್ತು ವೈಜ್ಞಾನಿಕ ಯೋಜನೆ ಇಲ್ಲದೆ ತೆಗೆದುಕೊಳ್ಳುವ ಆತುರದ ನಿರ್ಧಾರಗಳು ಪೋಷಕರು, ಮಕ್ಕಳು ಹಾಗೂ ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಶಿಕ್ಷಕರಿಗೆ ಪಾಠಕ್ಕಿಂತ ಆಡಳಿತ ನಿರ್ವಹಣೆಯೇ ದೊಡ್ಡ ಹೊರೆಯಾಗುತ್ತಿದೆ.