ವಾಚಕರ ವಾಣಿ | ನೈತಿಕ ಶಿಕ್ಷಣ: ನಿಜ ಸ್ವರೂಪ ಪಡೆಯಲಿ
ಭಾರತವೆಂಬ ಬಹುಧರ್ಮ ರಾಷ್ಟ್ರದಲ್ಲಿ ನೈತಿಕ ಶಿಕ್ಷಣಕ್ಕೆ ಹಲವಾರು ಕವಲುಗಳಿವೆ. ಅವುಗಳೇ ಹಿಂದೂ ಧರ್ಮದ ಭಗವದ್ಗೀತೆ, ಮುಸ್ಲಿಂ ಧರ್ಮದ ಕುರಾನ್, ಕ್ರೈಸ್ತ ಧರ್ಮದ ಬೈಬಲ್ ಮುಂತಾದವು. ಎಲ್ಲ ಧರ್ಮಗಳು ಸತ್ಯ, ಅಹಿಂಸೆ, ಪರೋಪಕಾರವನ್ನೇ ಪ್ರತಿಪಾದಿಸುತ್ತವೆ ಎಂಬುದನ್ನು ನಾವಿಲ್ಲಿ ಮುಖ್ಯವಾಗಿ ಗಮನಿಸಬೇಕಾಗಿದೆ. ಆದಕಾರಣ ಒಂದೇ ಧರ್ಮಗ್ರಂಥದಿಂದ ನೈತಿಕ ಶಿಕ್ಷಣವನ್ನು ಅಳವಡಿಸುವುದರ ಬದಲು ಅನುಭವಿ ತಂಡ ರಚಿಸಿ, ಈ ಎಲ್ಲ ಧರ್ಮಗ್ರಂಥಗಳಿಂದ ವಿಚಾರ, ತತ್ವಗಳನ್ನು ಸಮಾನವಾಗಿ ಹೆಕ್ಕಿ ತೆಗೆದು ನೈತಿಕ ಶಿಕ್ಷಣವನ್ನು ಜಾರಿಗೊಳಿಸಬೇಕು. ಆಗ ಯಾವುದೇ ಗೊಂದಲ, ಅನುಮಾನಗಳಿಲ್ಲದೆ ನೈತಿಕ ಶಿಕ್ಷಣವು ಅದರ ನಿಜ ಸ್ವರೂಪವನ್ನು ಪಡೆಯಬಹುದು.
-ಪ್ರಭು ಬ. ನೀಲಿ, ಮುಧೋಳ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.