ನಮ್ಮ ಹೆಮ್ಮೆಯ ಇಸ್ರೊ ಹಾರಿಸಿದ ಉಪಗ್ರಹಗಳ ತರಂಗಾಂತರವನ್ನು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಮಾರಿ, ಮೊಬೈಲ್ ಟವರ್ಗಳೆಂಬ ಲೋಹದ ಅಸ್ತಿಪಂಜರವನ್ನಷ್ಟೇ ಬಿಎಸ್ಎನ್ಎಲ್ಗಾಗಿ ಉಳಿಸಿ, ಉತ್ತಮ ನೆಟ್ವರ್ಕ್ ಕೊಡಿ ಎಂದರೆ ಬಿಎಸ್ಎನ್ಎಲ್ ಸಿಬ್ಬಂದಿ ಏನು ಮಾಡಿಯಾರು? ನಮ್ಮ ತಾಯ್ನೆಲದ ಹೆಮ್ಮೆಯ ಕೂಸಾಗಿದ್ದ ಸಂಸ್ಥೆಯೊಂದು ರೋಗಗ್ರಸ್ತವಾಗಿದ್ದರೆ ಅದಕ್ಕೆ ಕಳವಳಗೊಂಡು, ಸುಸ್ಥಿತಿಗೆ ತರುವ ಕ್ರಮ ಕೈಗೊಳ್ಳುವುದು ಬಿಟ್ಟು ಅದನ್ನು ‘ಮುಗಿಸಿ’ ಖಾಸಗಿಯವರಿಗೆ ಮಾರಲು ಹೊರಡುವ ಧೋರಣೆಯು ಭವ್ಯಭಾರತದ ಭವಿಷ್ಯದ ಕುರಿತು ಆತಂಕ ಹುಟ್ಟಿಸುವಂತಿದೆ.