ಬಿಎಸ್ಎನ್ಎಲ್ ನೌಕರರ ಬಗ್ಗೆ ಸಂಸದ ಅನಂತಕುಮಾರ ಹೆಗೆಡೆ ಅವರ ಕಟು ಟೀಕೆ ಸಕಾಲಿಕವಾಗಿದ್ದು, ನೌಕರರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಇಷ್ಟು ದಿನ ನಿಷ್ಪ್ರಯೋಜಕ, ನಿರುಪಯೋಗಿ ನೌಕರರ ಜಾತ್ರೆ ನಡೆಸಿ, ಬರೀ ರಾಜಕೀಯ, ಸಂಬಳ ಸವಲತ್ತುಗಳಿಗೆ ಭಯಂಕರ ಹೋರಾಟ ನಡೆಸಿದವು. ಬಿಎಸ್ಎನ್ಎಲ್ ಉಳಿಸಬೇಕು, ನಾವು ಉಣ್ಣುವ ಅನ್ನದ ಋಣಕ್ಕಾದರೂ ಬಳಕೆದಾರರಿಗೆ ಸೂಕ್ತ ಸಕಾಲಿಕ ಸೇವೆ ನೀಡಬೇಕು ಎಂಬ ಮನೋಭಾವ ಕಡೆಗೂ ಬರಲೇ ಇಲ್ಲ.