ಉಳಿಕೆಯಾದ ಹಣವನ್ನು ಆಸ್ಪತ್ರೆಗೆ ವಿನಿಯೋಗಿಸಬೇಕು ಎಂಬ ಸಲಹೆ ನೀಡಲಾಗಿದೆಯಂತೆ. ಇಷ್ಟೆಲ್ಲಾ ಹೇಳುವವರು, ಒಟ್ಟು ದಸರಾಕ್ಕೆ ಇಷ್ಟು ಅನುದಾನ ಕೊಡುತ್ತೇವೆ, ಸರಳ ದಸರಾ ಎಂದು ತೀರ್ಮಾನ ಮಾಡಿರುವುದರಿಂದ ಉಳಿದ ಹಣವನ್ನು ಕೋವಿಡ್ ವಿರುದ್ಧದ ಹೋರಾಟಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಆದರೆ ಈಗ ಎಲ್ಲಾ ಕೊಟ್ಟು ಉಳಿದರೆ ಆಸ್ಪತ್ರೆಗೆ ಎಂದರೆ ಅದಕ್ಕೆ ಅರ್ಥವಿಲ್ಲ.