ಬಸವಣ್ಣ ಮತ್ತು ಅವರ ವಚನಗಳನ್ನು ಮೋದಿಯವರು ಆಗಾಗ ತಮ್ಮ ಮಾತುಗಳಲ್ಲಿ ಉದಾಹರಿಸುವುದು ಸ್ವಾಗತಾರ್ಹ. ಈ ನೆನಪಿನ ಜೊತೆಗೆ ಅತಿವೃಷ್ಟಿ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕದ ಜನರ ಬದುಕು ಬಯಲಿಗೆ ಬಿದ್ದಿರುವುದನ್ನೂ ಅವರು ನೆನಪಿಸಿಕೊಳ್ಳಬೇಕು. ಈವರೆಗೂ ಈ ಸಂಬಂಧದ ಪರಿಹಾರ ಧನ ಬಿಡುಗಡೆ ಮಾಡದಿರುವುದು ವಿಷಾದಕರ. ಎಲ್ಲ ಒಳ್ಳೆಯದರ ಜೊತೆಗೆ ಜನರ ಸಂಕಷ್ಟಗಳತ್ತಲೂ ಗಮನಹರಿಸಿ ತಕ್ಷಣ ಹಣ ಬಿಡುಗಡೆ ಮಾಡಿದರೆ, ಆಗ ನಿಜವಾಗಿಯೂ ರಾಜ್ಯವು ‘ಕಲ್ಯಾಣ ಕರ್ನಾಟಕ’ ಆದೀತು.