ಈಗಾಗಲೇ ರಾಜ್ಯದ ಹಲವು ಸಂಘಟನೆಗಳು, ಆಹಾರ ತಜ್ಞರು, ಶಾಲಾ ಮಕ್ಕಳು, ಪೋಷಕರು ಈ ಕುರಿತು ಧ್ವನಿ ಎತ್ತಿದ್ದರೂ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಹೇಳುವಂತೆ, ಮಕ್ಕಳಿಗೆ ಸಿಗಬೇಕಿರುವ ಪೌಷ್ಟಿಕಾಂಶಗಳನ್ನು ಅವರಿಗೆ ಒದಗಿಸುವ ಊಟದಲ್ಲಿ ಸಿಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ‘ಈರುಳ್ಳಿ, ಬೆಳ್ಳುಳ್ಳಿಯಲ್ಲಿ ಇರುವಷ್ಟೇ
ಪೌಷ್ಟಿಕಾಂಶ ಇರುವ ಸಾಮಗ್ರಿಗಳನ್ನು ಬಳಸಲಾಗುತ್ತಿದೆ’ ಎಂಬ ಪ್ರತಿಷ್ಠಾನದ ಹೇಳಿಕೆಗೆ ಓಗೊಟ್ಟಿರುವುದು ಸಮಂಜಸವಲ್ಲ.