ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಈ ಬಾರಿಯ ಬನದ ಹುಣ್ಣಿಮೆ ಜಾತ್ರೆಯನ್ನು ಕೋವಿಡ್– 19 ಕಾರಣದಿಂದ ರದ್ದು ಮಾಡಿರುವುದನ್ನು (ಪ್ರ.,ವಾ., ಜ. 19) ತಿಳಿದು ಅಚ್ಚರಿಯಾಯಿತು. ಕೊರೊನಾ ವೈರಾಣುವಿನ ಭಯದಲ್ಲಿ ಅನೇಕ ಜಾತ್ರೆಗಳು ಈಗಾಗಲೇ ರದ್ದಾಗಿವೆ. ಆದರೆ ಸಹಸ್ರಾರು ಜನರನ್ನು ಒಳಗೊಂಡ ವಿವಿಧ ರಾಜಕೀಯ ಪಕ್ಷಗಳ ಸಮಾವೇಶಗಳು ಎಗ್ಗಿಲ್ಲದೇ ನಡೆಯುತ್ತಿವೆ. ಜಾತಿ ಸಮಾವೇಶಗಳು, ಪಾದಯಾತ್ರೆಗಳಲ್ಲಿ ಜನ ನಿರಾತಂಕವಾಗಿ ಭಾಗವಹಿಸುತ್ತಿದ್ದಾರೆ. ಬಸ್ ನಿಲ್ದಾಣಗಳು, ಬಸ್ಗಳು, ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ದೆಹಲಿಯಲ್ಲಿ ಹಲವಾರು ದಿನಗಳಿಂದ ನಡೆಯುತ್ತಿರುವ ರೈತ ಚಳವಳಿಯಲ್ಲಿ ಸಾವಿರಾರು ಜನ ಭಾಗವಹಿಸಿದ್ದಾರೆ.