ಜಾತಿ ಎನ್ನುವುದು ಒಂದು ಕಾಲ್ಪನಿಕ ಪದ. ಇದು ಜೀವಂತವಾಗಿ ಇರಲಿ ಅಥವಾ ಇಲ್ಲದಿರಲಿ ಯಾರಿಗೂ ನಷ್ಟವಿಲ್ಲ. ಜಾತಿ ನಿಂದನೆಗೆ ಒಳಗಾಗುವವರು ಮೊದಲು ಸ್ವಾಭಿಮಾನಿಗಳಾಗಲು, ಜ್ಞಾನಿಗಳಾಗಲು, ಸಂಸ್ಕಾರವಂತರಾ ಗಲು, ಆರ್ಥಿಕವಾಗಿ ಸಶಕ್ತರಾಗಲು ಶ್ರಮ ಪಡಬೇಕು. ಸೂಕ್ತ ವ್ಯಕ್ತಿಗಳ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. ಸಂವಿಧಾನದ ಅರಿವಿರಬೇಕು. ಮೂಢನಂಬಿಕೆ ತ್ಯಜಿಸಿ, ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ನಮ್ಮ ಅಭಿವೃದ್ಧಿ ನಮ್ಮ ಕೈಯಲ್ಲಿದೆ ಎಂಬುದನ್ನು ಮರೆಯಬಾರದು.