‘ಯುಜಿಸಿಯ ಏಳನೆಯ ವೇತನ ಆಯೋಗದ ಶಿಫಾರಸನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು’ (ವಾ.ವಾ., ಆ. 16) ಎಂದು ಡಾ. ಡಿ.ಎಸ್. ಚೌಗಲೆ ಅವರು ಆಗ್ರಹಿಸಿದ್ದಾರೆ. ಸಂತೋಷ, ಆದರೆ ಆರನೇ ವೇತನ ಆಯೋಗದ (2006 ರಿಂದ 2016ರ ನಡುವಿನದು) ಬಾಕಿ ಹಣವೇ ಇನ್ನೂ ಪೂರ್ಣವಾಗಿ ಸಂದಾಯವಾಗಿಲ್ಲ. ಈ ಅವಧಿಯಲ್ಲಿ ಕೆಲಸ ಮಾಡಿ ನಿವೃತ್ತರಾದ ನೂರಾರು ಪ್ರಾಧ್ಯಾಪಕರು, ಉಳಿದಿರುವ ಕೊನೆಯ ಕಂತಿನ ಈ ಬಾಕಿ ಹಣಕ್ಕಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರ ಇತ್ತ ಗಮನಹರಿಸಿ ಬಾಕಿ ವೇತನವನ್ನು ಸಂದಾಯ ಮಾಡಲಿ.