ಈ ನಿಯಮ ಹೊಸದೇನೂ ಅಲ್ಲ. ಈಗಾಗಲೇ ಕೆಎಸ್ಆರ್ಟಿಸಿ ಚಾಲಕರು ಹಾಗೂ ನಿರ್ವಾಹಕರು ಈ ನಿಯಮ ಅನುಸರಿಸುತ್ತಿದ್ದಾರೆ. ಟಿಕೆಟ್ನಿಂದ ಸಂಗ್ರಹವಾದ ಮೊತ್ತಕ್ಕಿಂತ ಹೆಚ್ಚು ಹಣ ನಿರ್ವಾಹಕರ ಬಳಿ ಇದ್ದರೆ, ಅವರನ್ನು ಅಮಾನತು ಮಾಡಲಾಗುತ್ತದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ನಿರ್ವಾಹಕರು ಮತ್ತು ಚಾಲಕರು ಸ್ವಂತ ಹಣವನ್ನು ಮಾರ್ಗಪತ್ರದಲ್ಲಿ ನಮೂದಿಸಿ, ಅದಕ್ಕೆ ಅಧಿಕಾರಿಗಳ ಸಹಿ ಹಾಕಿಸಿ ದೃಢೀಕರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಾಗಿದೆ. ಎಲ್ಲ ಪೊಲೀಸರಿಗೂ ಈ ನಿಯಮವನ್ನು ಅನ್ವಯಿಸಿದರೆ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಬಹುದಾಗಿದೆ. ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾದಾಗ ಪೊಲೀಸರು ತಮ್ಮ ಬಳಿ ಇರುವ ಹಣದ ಮೊತ್ತವನ್ನು ನೋಂದಾಯಿಸಿ ನಂತರ ಕರ್ತವ್ಯ ನಿರ್ವಹಿಸಬೇಕು. ಹೆಚ್ಚುವರಿ ಹಣ ಇರುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದರೆ, ಅಂತಹವರನ್ನು ಅಮಾನತು ಮಾಡುವ ಕಠಿಣ ನಿಯಮವನ್ನು ಜಾರಿಗೆ ತರಬೇಕಾಗಿದೆ.