ಆದರೆ, ಪಕ್ಷಗಳು ಜನರನ್ನು ತಮ್ಮತ್ತ ಸೆಳೆಯಲು ಅನುಸರಿಸಿದ ಮಾರ್ಗ ಯಾವುದು? ತಮ್ಮ ಪ್ರಣಾಳಿಕೆಯಲ್ಲಿ ಅಭಿವೃದ್ಧಿಯ ವಿಚಾರಗಳನ್ನ ಉಲ್ಲೇಖಿಸುವ ಬದಲು, ಧರ್ಮ– ಜಾತಿಯ ವಿಚಾರಗಳನ್ನು ಮುಂದೆ ಮಾಡಿಕೊಂಡು ಮತ ಯಾಚಿಸುತ್ತಿವೆ. ಧಾರ್ಮಿಕ ವಿಚಾರಗಳನ್ನು ಕೆರಳಿಸಿ ಜನರನ್ನು ಬಹು ಬೇಗ ತಮ್ಮತ್ತ ಸೆಳೆಯಬಹುದು ಎಂಬದು ರಾಜಕೀಯ ಪಕ್ಷಗಳ ಹುನ್ನಾರ. ಇದನ್ನು ತಡೆಯಬೇಕಾದರೆ ಜನರು ಎಚ್ಚೆತ್ತುಕೊಳ್ಳುವುದು ಅಗತ್ಯ.