<p>ಕರ್ನಾಟಕದ ‘ಪಂಚನದಿಗಳ ನಾಡು’ ಎಂದು ಹೆಸರಾಗಿರುವ ವಿಜಯಪುರ ಜಿಲ್ಲೆಯು ಶಿಕ್ಷಣದಲ್ಲಿ ಕಳಪೆ ಸಾಧನೆ ತೋರುತ್ತಿರುವುದು ನೋವಿನ ಸಂಗತಿ. ಶಾಲಾ ಹಂತ ಮುಗಿದ ಕೂಡಲೇ ಮಕ್ಕಳನ್ನು ದುಡಿಮೆಗೆ ದೂಡುವ ಪ್ರವೃತ್ತಿ ಇರುವುದು ಈ ಭಾಗದ ದುರ್ದೈವ. ಇದಕ್ಕೆ ಬಡತನವೇ ಕಾರಣ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಏನಾದರೂ ಬೆಳೆಯಬೇಕೆಂದರೆ ನೀರಾವರಿ ಸೌಕರ್ಯ ಇಲ್ಲ. ಮಕ್ಕಳನ್ನು ಪೋಷಕರು ದುಡಿಯಲು ಹೊರ ರಾಜ್ಯಗಳಿಗೆ ಕಳುಹಿಸುತ್ತಾರೆ. ಹೀಗಾಗಿ, ಲೇಖನಿ ಹಿಡಿಯಬೇಕಾದ ಕೈಗಳು ಹಾರೆ, ಗುದ್ದಲಿ ಹಿಡಿಯಬೇಕಾಗಿ ಬಂದಿದೆ.</p>.<p>ಶಾಲೆಯಲ್ಲಿ ತರಗತಿಗಳು ಸಮರ್ಪಕವಾಗಿ ನಡೆಯದಿರುವುದು, ಶಿಕ್ಷಕರು ಮತ್ತು ಮಕ್ಕಳ ನಡುವೆ ಹೊಂದಾಣಿಕೆ ಕೊರತೆ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸದಿರುವುದು... ಇವೆಲ್ಲವೂ ಶಾಲಾ ಕಾಲೇಜುಗಳ ನೂನ್ಯತೆಯಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.</p>.<p><em><strong>-ಮಹಾಂತೇಶ ಎಮ್. ಯಂಕಂಚಿ,ಸಿಂದಗಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕದ ‘ಪಂಚನದಿಗಳ ನಾಡು’ ಎಂದು ಹೆಸರಾಗಿರುವ ವಿಜಯಪುರ ಜಿಲ್ಲೆಯು ಶಿಕ್ಷಣದಲ್ಲಿ ಕಳಪೆ ಸಾಧನೆ ತೋರುತ್ತಿರುವುದು ನೋವಿನ ಸಂಗತಿ. ಶಾಲಾ ಹಂತ ಮುಗಿದ ಕೂಡಲೇ ಮಕ್ಕಳನ್ನು ದುಡಿಮೆಗೆ ದೂಡುವ ಪ್ರವೃತ್ತಿ ಇರುವುದು ಈ ಭಾಗದ ದುರ್ದೈವ. ಇದಕ್ಕೆ ಬಡತನವೇ ಕಾರಣ. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಏನಾದರೂ ಬೆಳೆಯಬೇಕೆಂದರೆ ನೀರಾವರಿ ಸೌಕರ್ಯ ಇಲ್ಲ. ಮಕ್ಕಳನ್ನು ಪೋಷಕರು ದುಡಿಯಲು ಹೊರ ರಾಜ್ಯಗಳಿಗೆ ಕಳುಹಿಸುತ್ತಾರೆ. ಹೀಗಾಗಿ, ಲೇಖನಿ ಹಿಡಿಯಬೇಕಾದ ಕೈಗಳು ಹಾರೆ, ಗುದ್ದಲಿ ಹಿಡಿಯಬೇಕಾಗಿ ಬಂದಿದೆ.</p>.<p>ಶಾಲೆಯಲ್ಲಿ ತರಗತಿಗಳು ಸಮರ್ಪಕವಾಗಿ ನಡೆಯದಿರುವುದು, ಶಿಕ್ಷಕರು ಮತ್ತು ಮಕ್ಕಳ ನಡುವೆ ಹೊಂದಾಣಿಕೆ ಕೊರತೆ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸದಿರುವುದು... ಇವೆಲ್ಲವೂ ಶಾಲಾ ಕಾಲೇಜುಗಳ ನೂನ್ಯತೆಯಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.</p>.<p><em><strong>-ಮಹಾಂತೇಶ ಎಮ್. ಯಂಕಂಚಿ,ಸಿಂದಗಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>