ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರಾಜಕೀಯ ತಂತ್ರಗಾರಿಕೆ ಹೊಸದಲ್ಲ

Last Updated 9 ಮೇ 2022, 22:30 IST
ಅಕ್ಷರ ಗಾತ್ರ

ರಾಜ್ಯದ ಮುಖ್ಯಮಂತ್ರಿ ಆಗುವವರಿಗೆ ಪಕ್ಷದ ಬೊಕ್ಕಸಕ್ಕೆ ಗಣನೀಯ ಧನಸಹಾಯ ಮಾಡುವ ಸಾಮರ್ಥ್ಯ ಇರಬೇಕು ಎನ್ನುವುದು ಬಹುತೇಕ ಎಲ್ಲಾ ಪಕ್ಷಗಳಲ್ಲಿ ಇರುವ ಅಲಿಖಿತ ನಿಯಮ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ ಮತ್ತು ಲಾಗಾಯ್ತಿನಿಂದ ಕೇಳುತ್ತಿರುವ ಮಾತು. ಇದನ್ನು ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ. ಯತ್ನಾಳ ಇದನ್ನು ಇನ್ನೂ ಸವಿಸ್ತಾರವಾಗಿ ಹೇಳಿ, ಇದರ ಹಿಂದೆ ಇರುವ ದೆಹಲಿ ದೊರೆಗಳ ಹೆಸರನ್ನೂ ಬಹಿರಂಗಪಡಿಸಿದ್ದರೆ ಅವರ ಹೇಳಿಕೆಗೆ ಇನ್ನೂ ತೂಕ ಬರುತ್ತಿತ್ತು.

‘ಹಿಟ್‌ ಆ್ಯಂಡ್‌ ರನ್‌’ ಮಾಡುವ ಅವರ ರಾಜಕೀಯ ನಡೆ ಮತ್ತು ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎನ್ನುವ ರಾಜಕೀಯ ತಂತ್ರಗಾರಿಕೆ, ಅವರು ಸತ್ಯವನ್ನು ಹೇಳಿದರೂ ಜನ ಅವುಗಳನ್ನು ರಾಜಕೀಯ ಸ್ಟಂಟ್‌ ಎಂದು ನೋಡುವಂತೆ ಮಾಡುತ್ತವೆ.

ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT