ರಾಜ್ಯದ ಮುಖ್ಯಮಂತ್ರಿ ಆಗುವವರಿಗೆ ಪಕ್ಷದ ಬೊಕ್ಕಸಕ್ಕೆ ಗಣನೀಯ ಧನಸಹಾಯ ಮಾಡುವ ಸಾಮರ್ಥ್ಯ ಇರಬೇಕು ಎನ್ನುವುದು ಬಹುತೇಕ ಎಲ್ಲಾ ಪಕ್ಷಗಳಲ್ಲಿ ಇರುವ ಅಲಿಖಿತ ನಿಯಮ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ ಮತ್ತು ಲಾಗಾಯ್ತಿನಿಂದ ಕೇಳುತ್ತಿರುವ ಮಾತು. ಇದನ್ನು ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಧಾಟಿಯಲ್ಲಿ ಹೇಳಿದ್ದಾರೆ. ಯತ್ನಾಳ ಇದನ್ನು ಇನ್ನೂ ಸವಿಸ್ತಾರವಾಗಿ ಹೇಳಿ, ಇದರ ಹಿಂದೆ ಇರುವ ದೆಹಲಿ ದೊರೆಗಳ ಹೆಸರನ್ನೂ ಬಹಿರಂಗಪಡಿಸಿದ್ದರೆ ಅವರ ಹೇಳಿಕೆಗೆ ಇನ್ನೂ ತೂಕ ಬರುತ್ತಿತ್ತು.