ಹಿಂದಿ ಏಕತಾ ದಿನದಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ವಿಶ್ವದಾದ್ಯಂತ ಕೋಟ್ಯಂತರ ಜನ ಬಳಸುವ ಭಾಷೆ ಹಿಂದಿ ಎಂದು ತಮ್ಮ ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲಾ ಭಾರತೀಯ ಭಾಷೆಗಳನ್ನು ಗೌರವಿಸುವುದಾಗಿ ಹೇಳಿ, ಹಿಂದಿಯನ್ನು ರಾಜಭಾಷೆಗೆ ಹೋಲಿಸಿ ಶುಭಾಶಯ ತಿಳಿಸಿದ್ದಾರೆ. ಕರ್ನಾಟಕದಲ್ಲಿ ರಾಜ್ಯಭಾರ ನಡೆಸಿದ ಕೆಲವು ರಾಜರು, ಭಾಷೆಯನ್ನು ಒಂದು ಸಂವಹನವಾಗಿ ನೋಡಿದರೇ ವಿನಾ ಶ್ರೇಷ್ಠತೆಯ ವ್ಯಸನದಲ್ಲಿ ಬೀಗಲಿಲ್ಲ. ವಿಜಯನಗರದ ಪ್ರಭುತ್ವ ಹಾಗೂ ಮೈಸೂರು ಅರಸರ ಆಳ್ವಿಕೆಯಲ್ಲಿ ಎಲ್ಲಾ ಭಾಷೆಗಳು ಸಮಾನ ಪ್ರಾಮುಖ್ಯ ಪಡೆದಿದ್ದ ವಿಚಾರವನ್ನು ಚರಿತ್ರೆಯ ಮೂಲಕ ಮನಗಾಣಬಹುದು. ಇದು ರಾಜಪ್ರಭುತ್ವದ ಸದಾಶಯಗಳಲ್ಲೊಂದು.