ಆಯುಧಪೂಜೆಯ ದಿನದಂದು ರಕ್ಷಣಾ ಸಚಿವರು ರಫೇಲ್ ಯುದ್ಧ ವಿಮಾನಕ್ಕೆ ಮತ್ತು ಆರ್ಎಸ್ಎಸ್ ಮುಖ್ಯಸ್ಥರು ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ದಾರೆ. ಧಾರ್ಮಿಕ ಸಂಕೇತಗಳು ಅಧಃಪತನಗೊಳ್ಳುತ್ತಿರುವುದಕ್ಕೆ ಇದೊಂದು ಮಾದರಿಯಷ್ಟೇ. ನೇಗಿಲು, ಕತ್ತಿ, ಕುಡುಗೋಲು, ಉಳಿ, ಗರಗಸದಂತಹ ಕೃಷಿ ಮತ್ತು ಕೈಕಸುಬಿನ ಆಯುಧಗಳನ್ನು ಪೂಜಿಸುವ ಮೂಲಕ ಶ್ರಮಜೀವನವನ್ನು ಗೌರವಿಸುವುದಕ್ಕೆ ಸಂಕೇತವಾಗಿದ್ದ ಹಬ್ಬವು, ಯಂತ್ರ ಸಂಸ್ಕೃತಿ ಶುರುವಾದಂತೆ ಅವುಗಳ ಪೂಜೆಯಾಗಿ ಮಾರ್ಪಟ್ಟಿತು.