ಪರಿಸರವಾದಿಗಳ ವಿರೋಧದಿಂದ, ಈವರೆಗೆ ಸುಮಾರು ₹ 300 ಕೋಟಿ ವೆಚ್ಚವಾಗಿರುವ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯು ನ್ಯಾಯಾಲಯದ ತಡೆಯ ಮೂಲಕ ಹಳಿ ತಪ್ಪಿರುವಾಗ, ಇಂತಹುದೇ ಯೋಜನೆಗೆ ಸರ್ಕಾರ ಅನುಮತಿ ನೀಡಿರುವುದು ತೀರಾ ಆಶ್ಚರ್ಯ. ಪ್ರಸ್ತಾವಿತ ಮೈಸೂರು– ಕುಶಾಲನಗರ ರೈಲು ಯೋಜನೆಯು ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯಂತೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವುದರಿಂದ ಈ ಯೋಜನೆಯೂ ಹಳಿ ಏರುವುದು ಸಂದೇಹ.