ಈಗ ಮಹತ್ವದ ಒಂದು ಪ್ರಸಂಗವನ್ನು ಗಮನಿಸಿ: ಕರ್ನಾಟಕದವರೇ ಆದ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು 1993ರ ಫೆಬ್ರುವರಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರತಿಜ್ಞಾವಿಧಿ ತೆಗೆದುಕೊಂಡ ನಂತರ, ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ಸಿಜೆಐ ಉದ್ದೇಶಿಸಿ ಹೇಳಿದ ಮಾತು: ‘ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ನಡುವೆ ಸೌಹಾರ್ದ ಸಂಬಂಧವನ್ನು ಎದುರು ನೋಡುತ್ತೇನೆ’. ಆ ಕ್ಷಣದಲ್ಲಿ, ನ್ಯಾಯಮೂರ್ತಿ ವೆಂಕಟಾಚಲಯ್ಯನವರ ಪ್ರತಿಕ್ರಿಯೆ ಹೀಗಿತ್ತು: ‘ಮಾನ್ಯ ಪ್ರಧಾನಿಯವರೇ, ನಮ್ಮ ನಿಮ್ಮ ಸಂಬಂಧವು ಸಂವಿಧಾನಕ್ಕೆ ಅನುಗುಣವಾಗಿ ಇರಬೇಕೇ ಹೊರತು ಸೌಹಾರ್ದಯುತವಾಗಿ ಅಲ್ಲ...’.