ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತಿರುವ ಪ್ರವಾಹಕ್ಕೆ ನದಿ ಪಾತ್ರಗಳಲ್ಲಿ ಆದ ಮಾನವನ ಅತಿಕ್ರಮಣ, ಬದಲಾದ ಜನಜೀವನ ಪ್ರಮುಖ ಕಾರಣಗಳು. ಕೆಲವು ದಶಕಗಳ ಹಿಂದೆ ನಾನು ಕೆಲ ವರ್ಷ ಉತ್ತರ ಕರ್ನಾಟಕದಲ್ಲಿ ಇದ್ದೆ. ಅಲ್ಲಿನ ಜನಜೀವನದ ಭಾಗವಾಗಿದ್ದ ವಸ್ತುಗಳಲ್ಲಿ ತೇಲು ಬುರುಡೆಗಳೂ ಸೇರಿದ್ದವು. ನದಿ ದಂಡೆಯ ಮೇಲೆ ವಾಸಿಸುವ ಎಲ್ಲರ ಮನೆಗಳಲ್ಲೂ ಸಾಧಾರಣವಾಗಿ ಒಂದೆರಡಾದರೂ ತೇಲು ಬುರುಡೆಗಳು ಇದ್ದೇ ಇರುತ್ತಿದ್ದವು.