(ಪ್ರ.ವಾ., ಏ. 10). ಇದರ ಹಿಂದಿನ ಕಾರಣಗಳು ಮತ್ತು ಮುಂದಿನ ಪರಿಣಾಮಗಳ ಬಗ್ಗೆ ನಿರಂತರ ಚರ್ಚೆ ಮಾಡುತ್ತಾ ಹೋಗಬಹುದು. ಅದಕ್ಕೆ ಬೇಕಾದ ಬುದ್ಧಿ- ಕೌಶಲವುಳ್ಳವರು ನಮ್ಮಲ್ಲಿ ಬೇಕಾದಷ್ಟು ಜನರಿದ್ದಾರೆ. ಇಂತಹ ದಾಳಿ- ಧ್ವಂಸಗಳು ಧೈರ್ಯದಿಂದ ನಡೆಯುವುದು ಬಹುಶಃ ಇವರ ಈ ಕೌಶಲವನ್ನು ನಂಬಿಯೇ. ಆದರೆ ಅದು ಇಲ್ಲೊಂದು ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಗೆ ಸಂವಿಧಾನಾತ್ಮಕವಾಗಿ ಬದ್ಧವಾದ ಸರ್ಕಾರವಿದೆ ಎಂಬುದನ್ನು ಮರೆತು, ಕರ್ನಾಟಕವೀಗ ತನ್ನ ಹಿತಕ್ಕಾಗಿ ಸಂವಿಧಾನಾತ್ಮಕ ಆಡಳಿತದಿಂದ ಹೊರಬಂದು ಅರಾಜಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ ಎಂದು ಭಾವಿಸಿ ಮಾಡಬಹುದಾದ ಬೇಜವಾಬ್ದಾರಿ ವಾದ ಮಾತ್ರವಾಗಿರುತ್ತದೆ.