ನಿತ್ಯವೂ ಈ ರಸ್ತೆಯಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಅನೇಕ ಮಂತ್ರಿಗಳು, ಅಧಿಕಾರಿಗಳು ಪ್ರಯಾಣಿಸುತ್ತಿದ್ದರೂ ದುರಸ್ತಿ ಭಾಗ್ಯ ಮಾತ್ರ ದೊರಕಿಲ್ಲ. ಸಾರ್ವಜನಿಕರಿಂದ ಹೆದ್ದಾರಿ ಟೋಲ್ ಶುಲ್ಕವನ್ನು ತಪ್ಪದೇ ವಸೂಲಿ ಮಾಡಲಾಗುತ್ತಿದೆ. ಜನ ಕೂಡಾ ತುಟಿಪಿಟಕ್ ಎನ್ನದೆ ಈ ರಸ್ತೆಯಲ್ಲಿ ನಿತ್ಯ ಶಪಿಸುತ್ತಾ ಪ್ರಯಾಣಿಸುತ್ತಿದ್ದಾರೆ. ಪ್ರಾಧಿಕಾರ ಇನ್ನಾದರೂ ಇದಕ್ಕೆ ಮುಕ್ತಿ ದೊರಕಿಸುವುದೇ?