ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ ಜನರ ಹಕ್ಕೊತ್ತಾಯ ಈಡೇರಲಿ

Last Updated 6 ಅಕ್ಟೋಬರ್ 2021, 14:47 IST
ಅಕ್ಷರ ಗಾತ್ರ

‘ಚಿಕ್ಕೋಡಿ ಜಿಲ್ಲೆಯಾಗುವುದು ಎಂದು?’ ಎಂದು ವೆಂಕಟೇಶ ಮಾಚಕನೂರ ಕೇಳಿದ್ದಾರೆ (ವಾ.ವಾ., ಅ. 4). ಈ ಬೇಡಿಕೆ ಅಲ್ಲಗಳೆಯುವಂಥದ್ದಲ್ಲ. ಆದರೆ ಚಿಕ್ಕೋಡಿಯು ಜಿಲ್ಲಾ ಕೇಂದ್ರ ಬೆಳಗಾವಿಯಿಂದ ಕೇವಲ 70 ಕಿ.ಮೀ. ಅಂತರದಲ್ಲಿದೆ. ಆದರೆ ಅಥಣಿ ಗಡಿ ಭಾಗದ ಕೇಂದ್ರವಾಗಿದ್ದು, ಜಿಲ್ಲಾ ಕೇಂದ್ರದಿಂದ 150 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿದೆ ಎಂಬುದು ಗಮನಾರ್ಹ. ಅಥಣಿಯು ರಾಜ್ಯದ ಅತಿ ದೊಡ್ಡ ತಾಲ್ಲೂಕುಗಳಲ್ಲಿ ಒಂದು. ಇಲ್ಲಿ ಎರಡು ವಿಧಾನಸಭಾ–ಅಥಣಿ ಮತ್ತು ಕಾಗವಾಡ– ಕ್ಷೇತ್ರಗಳಿವೆ. ಈ ಕಾರಣಕ್ಕಾಗಿ ಜಿಲ್ಲೆಯಾಗುವ ಎಲ್ಲ ಅರ್ಹತೆ ಪಡೆದಿದೆ. ಗಡಿಭಾಗದ ಅನಂತಪೂರ, ತೆಲಸಂಗ, ಸಾವಳಗಿ, ಸತ್ತಿ ಮತ್ತು ಹಾರೂಗೇರಿ ಹೋಬಳಿಗಳು ನೂತನ ತಾಲ್ಲೂಕುಗಳಾಗಬೇಕೆಂಬ ಬೇಡಿಕೆ ಇದೆ. ಇವು ರಚನೆಯಾದರೆ ಮತ್ತು ಅಥಣಿಗೆ ಹೊಸ ಜಿಲ್ಲೆಯಾಗುವ ಅವಕಾಶ ದೊರೆತರೆ 45 ಕಿ.ಮೀ. ಅಂತರದಲ್ಲಿ 8 ತಾಲ್ಲೂಕುಗಳು ಈ ನೂತನ ಜಿಲ್ಲೆಗೆ ಸೇರ್ಪಡೆಯಾಗಬಹುದು. ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಲಿ.

ಯಾವುದೇ ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಕೇಂದ್ರಗಳು ನಿಗದಿತ ಅಂತರದಲ್ಲಿ ಇರಬೇಕಾದುದು ಆಡಳಿತದ ಹಿತದೃಷ್ಟಿಯಿಂದ ಅಗತ್ಯ. ಆದರೆ ಸ್ವಾತಂತ್ರ್ಯ ದೊರೆತು ಏಳು ದಶಕಗಳು ಉರುಳಿದರೂ ಈ ಭಾಗದ ಜನ ನಿತ್ಯ ಕಚೇರಿ ಕೆಲಸಗಳಿಗಾಗಿ ಬೆಳಗಾವಿ ಕೇಂದ್ರಕ್ಕೆ 300 ರಿಂದ 350 ಕಿ.ಮೀ. ಪ್ರಯಾಸದ ಪ್ರಯಾಣ ಮಾಡುವುದು ತಪ್ಪಿಲ್ಲ. ಈ ಪ್ರಯಾಸ ಇನ್ನೂ ಎಷ್ಟು ದಿನ? ಪ್ರಾದೇಶಿಕ ಅಸಮಾನತೆಯನ್ನು ತಕ್ಕಮಟ್ಟಿಗಾದರೂ ಕಡಿಮೆ ಮಾಡಬೇಕಾದರೆ ಅಥಣಿಯನ್ನು ರಾಜ್ಯದ 32ನೇ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಇದು, ಈ ಭಾಗದ ಜನರ ಆಶಯ ಮತ್ತು ಹಕ್ಕೊತ್ತಾಯ.

-ದೇವೇಂದ್ರ ಬಿಸ್ವಾಗರ,ಅಥಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT