‘ಎಎವೈ, ಬಿಪಿಎಲ್ ಕಾರ್ಡ್ನಲ್ಲಿ ಹೆಸರಿರುವವರು ಅದನ್ನು ರದ್ದುಪಡಿಸಿಕೊಳ್ಳಬೇಕೆಂಬ ಸರ್ಕಾರದ ಆದೇಶ ಶೇ 95ರಷ್ಟು ನೌಕರರಿಗೆ ಗೊತ್ತಿಲ್ಲ, ಹೀಗಾಗಿ ಈ ಕೆಲಸಕ್ಕಾಗಿ ತಮಗೆ 6 ತಿಂಗಳ ಕಾಲಾವಕಾಶ ನೀಡಿ, ದಂಡ ವಸೂಲಿಯಿಂದ ಮುಕ್ತಗೊಳಿಸಬೇಕು’ ಎಂದು ಕೆಲವು ಸರ್ಕಾರಿ ನೌಕರರು ಆಗ್ರಹಿಸಿರುವುದು (ಪ್ರ.ವಾ., ಫೆ. 15) ಕೇಳಿದವರಲ್ಲಿ ಮುಜುಗರ ಉಂಟುಮಾಡುವಂತಹದ್ದು. ಇದು, ಕಾನೂನಿನಿಂದ ನುಣುಚಿಕೊಳ್ಳುವ ಉದ್ದೇಶಪೂರ್ವಕ ಆಗ್ರಹವೋ ಅಥವಾ ಸರ್ಕಾರದ ಆದೇಶ ತಿಳಿಯದಂತಹ ದಡ್ಡತನವೋ ತಿಳಿಯುತ್ತಿಲ್ಲ.