ನಾಡಿಗೆ ಅನ್ನ ನೀಡುವ ರೈತರಲ್ಲಿ ಬಹುತೇಕರು ಅನಕ್ಷರಸ್ಥರು. ಹಾಗೆಯೇ ಕುಂಬಾರಿಕೆ ಮಾಡುವವರು, ಬುಟ್ಟಿ ಹೆಣೆಯುವವರು, ನೇಕಾರರು, ಗೊಂದಲಿಗರು, ಹರಿಕಥೆ ಹೇಳುವ ಜನಪದರು ಹೀಗೆ ಗ್ರಾಮೀಣ ಪ್ರದೇಶದ ಗುಡಿ ಕೈಗಾರಿಕೆಯಲ್ಲಿ ತೊಡಗಿಕೊಂಡವರು ಅನಕ್ಷರಸ್ಥರಾಗಿದ್ದಾರೆ. ಅವರು ತಮ್ಮ ಕೌಶಲದಲ್ಲಿ ಅಪ್ರತಿಮ ತಂತ್ರಜ್ಞಾನ ಹೊಂದಿದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ, ಪರಿಷತ್ತಿನಲ್ಲಿರುವ ಅನಕ್ಷರಸ್ಥರನ್ನು ಹೆಬ್ಬೆಟ್ಟುಗಳೆಂದು ಹೀಯಾಳಿಸುವುದು ಸರಿಯಲ್ಲ.
-ವೀರಹನುಮಾನ,ರಾಯಚೂರು