ಎಲ್ಲ ಕ್ಷೇತ್ರಗಳಲ್ಲೂ ಜಾತೀಯತೆ, ಧರ್ಮ, ಕುಲ, ಗೋತ್ರ ಎಂದು ಒದ್ದಾಡುತ್ತಾ ಇರುವಾಗ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಳ್ಳುಂಡೆಯ ಕೃಷಿಕ ಕೆ.ಟಿ. ನಾಗರಾಜ್ ಎಂಬುವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ವಿನಿಯೋಗಿ
ಸುತ್ತಿರುವುದನ್ನು ಓದಿ (ಪ್ರ.ವಾ., ಮಾರ್ಚ್ 13) ರೋಮಾಂಚನವಾಯಿತು. ‘ದೇವಸ್ಥಾನಗಳು ಜಾತಿ ವ್ಯವಸ್ಥೆಯ ಪ್ರತೀಕ. ಹೀಗಾಗಿ ಇದರ ಬದಲು ಶಾಲೆಗಳಿಗೆ ದಾನ ಮಾಡಿದರೆ ದೇವರು ಮೆಚ್ಚುತ್ತಾರೆ’ ಎಂದು ಹೇಳಿರುವ ಅವರ ಮಾತು ಅರ್ಥಪೂರ್ಣವಾಗಿದೆ.