ಆದರೆ, ಮಂಡ್ಯ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಆದಷ್ಟು ಮಟ್ಟಿಗೆ ತಾಳ್ಮೆಯಿಂದ ಇದ್ದದ್ದು, ಆಂಗಿಕ ಭಾಷೆಯ ಮೇಲೆ ಹಿಡಿತ ಇಟ್ಟುಕೊಂಡಿದ್ದು, ರಾಜಕೀಯ ವಿರೋಧಿಗಳ ಬಗ್ಗೆ ನಿಯಂತ್ರಣ ತಪ್ಪಿ ಮಾತನಾಡದೇ ಇದ್ದದ್ದು, ಸವಾಲಿಗೆ ಸಹಜವಾದ ಸವಾಲನ್ನು ಎಸೆದದ್ದು ಮುಂದಿನ ಚುನಾವಣಾ ಅಭ್ಯರ್ಥಿಗಳಿಗೆ ಮಾದರಿ. ಶಾಸಕ ಸಿ.ಟಿ.ರವಿ ಅವರು ರಾಜಕೀಯ ವಿರೋಧಿಗಳ ಬಗೆಗೆ ಆಡಿದ ಒಂದು ಮಾತಂತೂ ಕೇಳಿಸಿಕೊಳ್ಳಲೂ ಅಸಹ್ಯ ಎಂಬಂತಿತ್ತು. ಈ ದಿಸೆಯಲ್ಲಿ ಸುಮಲತಾ ಅವರಿಗೊಂದು ಸಲಾಂ ಹೇಳಲೇಬೇಕು.
-ಬೀರಣ್ಣ ನಾಯಕ ಮೊಗಟಾ,ಯಲ್ಲಾಪುರ