ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡು ಹೊಡೆದದ್ದು ಶ್ರೀರಾಮನಿಗೆ

Last Updated 31 ಜನವರಿ 2019, 20:15 IST
ಅಕ್ಷರ ಗಾತ್ರ

ಹಿಂದೂ ಮಹಾಸಭಾ ಸದಸ್ಯರು ಗಾಂಧೀಜಿ ಹತ್ಯೆ ಘಟನೆಯನ್ನು ಮರುಸೃಷ್ಟಿಸಿ ಸಂಭ್ರಮಾಚರಿಸಿದ್ದು ಓದಿ (ಪ್ರ.ವಾ., ಜ.31) ಅಶ್ರು ಸುರಿಯಿತು. ನನ್ನಂತೆಯೇ ಕೋಟಿ ಕೋಟಿ ಪ್ರಜೆಗಳು ದುಃಖಪಟ್ಟಿರುತ್ತಾರೆ. ಇದು ನಡೆದದ್ದು ಪಾಕಿಸ್ತಾನದಲ್ಲಿ ಅಲ್ಲ, ಭಾರತದಲ್ಲಿ!

ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಎಂಬ ಮಹಿಳೆಯ ಗುಂಡು ಮಹಾತ್ಮನಿಗೆ ಮಾತ್ರವಲ್ಲ, ಅವರ ಹೃದಯದಲ್ಲಿದ್ದ ಪ್ರಭು ಶ್ರೀರಾಮಚಂದ್ರನಿಗೂ ಹೊಡೆದದ್ದು. ದೇಶದಲ್ಲೆಲ್ಲಾ ರಾಮನಾಮ ಬಿತ್ತಿದ ಮಹಾನುಭಾವನಿಗೆ ಅವನ ಪುಣ್ಯತಿಥಿ ದಿನ ಇಂತಹ ಸೇವೆ! ಎಂತಹ ಅನ್ಯಾಯ. ನಮ್ಮ ಪ್ರಧಾನಿ ಏನು ಮಾಡುತ್ತಿದ್ದಾರೆ? ಇಂತಹ ಅಜ್ಞಾನಿಗಳಿಗೆ ಜ್ಞಾನೋದಯ ಆಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT