ಆಸ್ಟ್ರೇಲಿಯಾದಲ್ಲಿ ನೀರಿನ ಕೊರತೆಯ ಕಾರಣದಿಂದ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿರುವುದು (ಪ್ರ.ವಾ., ಜ. 9) ಹೃದಯವಿದ್ರಾವಕ ಸುದ್ದಿ. ಇದನ್ನು ತಿಳಿದು ಮನಸ್ಸಿಗೆ ತುಂಬಾ ನೋವಾಯಿತು. ಕಾಳ್ಗಿಚ್ಚಿನಿಂದ ತತ್ತರಿಸಿ ನೀರಿಗೆ ಹಾಹಾಕಾರ ಉಂಟಾಗಿರುವ ಕಾರಣಕ್ಕೆ ಮೂಕಪ್ರಾಣಿಗಳ ಜೀವ ತೆಗೆಯುವುದು ಸರಿಯೇ? ಹೀಗೆ ಒಂದೊಂದು ಉದ್ದೇಶಕ್ಕೆ ಒಂದೊಂದು ಸಂತತಿಯನ್ನು ಕೊಲ್ಲುತ್ತಾ ಹೋದರೆ, ಇಡೀ ಪ್ರಾಣಿಸಂಪತ್ತೇ ನಶಿಸಿಹೋದೀತು!