ಜನಪ್ರತಿನಿಧಿಗಳು ಪಕ್ಷಾಂತರ ಮಾಡುವುದು ಲೋಕ ಕಲ್ಯಾಣಕ್ಕಲ್ಲ, ಅಧಿಕಾರದ ಸ್ವಾರ್ಥಕ್ಕಾಗಿ ಎಂಬುದು ಗೊತ್ತಿರುವ ವಿಚಾರ. ಅಂಥವರಿಗೆ ಚುನಾವಣಾ ನಿಷೇಧವೇ ಮದ್ದು. ಆದರೆ ಈ ಕೆಲಸ ಮಾಡುವವರು ಯಾರು? 22 ಜನರ ರಾಜೀನಾಮೆ ಕೊಡಿಸಿ ಉಪಚುನಾವಣೆ ಮಾಡಿಸಿದ ಯುಡಿಯೂರಪ್ಪನವರೇ? ಅಥವಾ ಹೇಗಾದರಾಗಲಿ ‘ಬದುಕಿದ್ದರೆ ಸಾಕು’ ಎನ್ನುವ ಕಾಂಗ್ರೆಸ್ಸಿಗರೇ?